Select Your Language

Notifications

webdunia
webdunia
webdunia
webdunia

ಅಧಿಕೃತ ಘೋಷಣೆಯೊಂದನ್ನು ಹೊರಡಿಸಿದ ನಿರ್ದೇಶಕ ಯೋಗರಾಜ್ ಭಟ್

ಅಧಿಕೃತ ಘೋಷಣೆಯೊಂದನ್ನು ಹೊರಡಿಸಿದ ನಿರ್ದೇಶಕ ಯೋಗರಾಜ್ ಭಟ್
ಬೆಂಗಳೂರು , ಸೋಮವಾರ, 23 ಏಪ್ರಿಲ್ 2018 (06:14 IST)
ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಫೋಟೋವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿರು ಹಿನ್ನಲೆಯಲ್ಲಿ ಇದೀಗ ನಿರ್ದೇಶಕ ಯೋಗರಾಜ್ ಭಟ್ ಅವರು ಅಧಿಕೃತ ಘೋಷಣೆಯೊಂದನ್ನು  ಹೊರಡಿಸಿದ್ದಾರೆ.


ಇತ್ತೀಚೆಗಷ್ಟೇ ಯೋಗರಾಜ್ ಭಟ್ ಹಾಗೂ ಅವರ ತಂಡ ಸೇರಿ ಮತದಾನದ ಕುರಿತಾಗಿ ಸರ್ಕಾರಕ್ಕೆ ಹಾಡನ್ನು ಚಿತ್ರೀಕರಿಸಿಕೊಟ್ಟಿದ್ದರು. ಇದೇ ಕಾರಣಕ್ಕೆ ಕೆಲವರು ಭಟ್ಟರು ರಾಜಕೀಯ ಪಕ್ಷ ಸೇರುತ್ತಾರೆ ಎಂದುಕೊಂಡು ಅವರ ಹೆಸರು ಹಾಗೂ ಫೋಟೋವನ್ನು ರಾಜಕೀಯವಾಗಿ ಉಪಯೋಗಿಸಿಕೊಂಡಿದ್ದಾರೆ.


ಇದನ್ನು ನೋಡಿ ಪ್ರತಿಕ್ರಿಯಿಸಿದ ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ "ನನ್ನ ಫೋಟೋವನ್ನು ರಾಜಕೀಯವಾಗಿ ಬಳಸಿರುವುದು ಕಂಡು ಬಂದಿದೆ ಹಾಗಾಗಿ ನನ್ನ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಅಲ್ಲ, ವಿರೋಧಿಯೂ ಅಲ್ಲ. ಜೈ ಭಾರತಾಂಬೆ ಜೈ ಕರ್ನಾಟಕ ಜೈ ಹಿಂದ್ ಜೈ ಮುಂದ್" ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ       

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಚಿತ್ರರಂಗಕ್ಕೆ ವಾಪಾಸಾದ ನಟ ಮಾಧವನ್