Select Your Language

Notifications

webdunia
webdunia
webdunia
webdunia

ನಿರ್ದೇಶಕ ಎಸ್ ನಾರಾಯಣ್‌ ಗೆ ತಮಿಳುನಾಡು ಮೂಲದ ಜ್ಯೋತಿಷಿಯಿಂದ ವಂಚನೆ

ನಿರ್ದೇಶಕ ಎಸ್ ನಾರಾಯಣ್‌ ಗೆ ತಮಿಳುನಾಡು ಮೂಲದ ಜ್ಯೋತಿಷಿಯಿಂದ  ವಂಚನೆ
ಬೆಂಗಳೂರು , ಶನಿವಾರ, 1 ಸೆಪ್ಟಂಬರ್ 2018 (07:20 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್‌  ಅವರಿಗೆ ತಮಿಳುನಾಡು ಮೂಲದ ಜ್ಯೋತಿಷಿಯೊಬ್ಬರು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.


ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿ,  ನಿರ್ದೇಶಕ ಎಸ್ ನಾರಾಯಣ್‌  ಅವರಿಗೆ ಎಪ್ಪತ್ತು ಕೋಟಿ ಹಣವನ್ನು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿ ಅದಕ್ಕಾಗಿ 20 ಲಕ್ಷ ನಿರ್ವಹಣಾ ಶುಲ್ಕವನ್ನು ನಿರ್ದೇಶಕ ಎಸ್ ನಾರಾಯಣ್‌  ಅವರಿಂದ ತೆಗೆದುಕೊಂಡಿದ್ದಾರಂತೆ.


ಆದರೆ ಸಾಲವೂ ಕೊಡದೆ, ಕೊಟ್ಟ ಹಣವನ್ನು ಹಿಂದಿರುಗಿಸದೆ ಜ್ಯೋತಿಷಿ ಮಂದಾರ ಮೂರ್ತಿ ವಂಚಿಸಿದ್ದಾನೆ ಎಂದು ಎಸ್ ನಾರಾಯಣ್ ಮಂದಾರ ಮೂರ್ತಿಯ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈ ದೂರಿನನ್ವಯ ಮಂದಾರ ಮೂರ್ತಿ ಅವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾಗೆ ಮತ್ತೆ ಚಿತ್ರರಂಗಕ್ಕೆ ಬರಲು ಹೇಳಿದ ಸ್ಯಾಂಡಲ್ ವುಡ್ ನಟಿ ಇವರೇ?