Select Your Language

Notifications

webdunia
webdunia
webdunia
webdunia

ಜೀವ್ನಾನೇ ನಾಟ್ಕ ಸಾಮಿ ಸಿನಿಮಾ ವಿವಾದದ ಬಗ್ಗೆ ನಿರ್ದೇಶಕರ ಸ್ಪಷ್ಟನೆ

ಜೀವ್ನಾನೇ ನಾಟ್ಕ ಸಾಮಿ ಸಿನಿಮಾ ವಿವಾದದ ಬಗ್ಗೆ ನಿರ್ದೇಶಕರ ಸ್ಪಷ್ಟನೆ
ಬೆಂಗಳೂರು , ಸೋಮವಾರ, 23 ಆಗಸ್ಟ್ 2021 (09:40 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ವಿವಾದಗಳೂ ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಹೊಸಬರ ಚಿತ್ರ ವಿವಾದಕ್ಕೀಡಾದರೆ ಅದು ಚಿತ್ರತಂಡಕ್ಕೆ, ಕಲಾವಿದರು, ತಂತ್ರಜ್ಞರಿಗೆ ದೊಡ್ಡ ಹೊಡೆತ ನೀಡುತ್ತದೆ.


ಕಿರಣ್ ರಾಜ್-ಶ್ರೀಹರ್ಷ ಪ್ರಮುಖ ಪಾತ್ರದಲ್ಲಿರುವ ಜೀವ್ನಾನೇ ನಾಟ್ಕ ಸಾಮಿ ಎಂಬ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿರುವ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ರಿಯಾಲಿಟಿ ಶೋಗಳ ಕತೆ-ವ್ಯಥೆ ಬಗ್ಗೆ ಈ ಸಿನಿಮಾ ಮಾಡಲಾಗಿತ್ತು. ಸಹಜವಾಗಿಯೇ ಈ ಸಿನಿಮಾದಲ್ಲಿ ರಿಯಾಲಿಟಿ ಶೋಗಳ ತೆರೆಯ ಹಿಂದಿನ ಸತ್ಯ ದರ್ಶನ ಮಾಡಿಸಲಾಗಿದೆ.

ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬಗ್ಗೆ ಇದೀಗ ನಿರ್ದೇಶಕ ರಾಜು ಭಂಡಾರಿ ರಾಜಾವರ್ತ ಸ್ಪಷ್ಟನೆ ನೀಡಿದ್ದಾರೆ. ‘ಯಾರನ್ನೂ ನೋಯಿಸಬೇಕು ಅಥವಾ ತೇಜೋವಧೆ ಮಾಡಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ಇದೊಂದು ಕಾಲ್ಪನಿಕ ಕತೆಯಷ್ಟೇ. ರಿಯಾಲಿಟಿ ಶೋಗಳ ಸಬ್ಜೆಕ್ಟ್ ಇರುವ ಕತೆಯಿದು. ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು’ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಸಿನಿಮಾ ಬಗ್ಗೆ ಹಾಡು ಮಾಡಿದವನಿಗೆ ರಾಕಿ ಭಾಯ್ ಯಶ್ ಹೇಳಿದ್ದು ಹೀಗೆ!