Webdunia - Bharat's app for daily news and videos

Install App

ಚಾಮರಾಜಪೇಟೆ ದನದ ಕೆಚ್ಚಲು ಕೊಯ್ದ ಈ ನನ್ಮಕ್ಳನ್ನು ಪಬ್ಲಿಕ್ ಆಗಿ ಸಾಯ್ಸಿಬಿಡ್ಬೇಕು: ನಿರ್ದೇಶಕ ಪ್ರೇಮ್

Krishnaveni K
ಸೋಮವಾರ, 13 ಜನವರಿ 2025 (15:18 IST)
Photo Credit: Instagram
ಬೆಂಗಳೂರು: ಚಾಮರಾಜಪೇಟೆಯಲ್ಲಿ ದನದ ಮೇಲೆ ಕ್ರೌರ್ಯ ನಡೆಸಿದ ಈ ನನ್ಮಕ್ಳನ್ನು ಪಬ್ಲಿಕ್ ಆಗಿ ಹೊಡೆದು ಸಾಯ್ಸಿಬಿಡ್ಬೇಕು ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ‘ಹೆಂಗೆ ಹೇಳೋದು ಅಂತ ಗೊತ್ತಾಗ್ತಿಲ್ಲ. ಹುಟ್ಟಿದಾಗ ಪ್ರತಿಯೊಬ್ಬ ವ್ಯಕ್ತಿಯು ತಾಯಿ ಎದೆ ಹಾಲು ಕುಡಿದು ಬೆಳೀತಾನೆ. ಈ ಕಾಮಧೇನು ಅಂದ್ರೆ ದೇವರು. ಪ್ರತಿಯೊಂದು ದೇವರುಗಳು ಕಾಮಧೇನುವಿನ ಬಾಲದಲ್ಲಿರುತ್ತದೆ.

ಹುಲ್ಲು ತಿಂದು ಪ್ಯೂರ್ ಹಾಲು ಕೊಡುತ್ತಾಳೆ. ಅಂತಹ ದನದ ಕೆಚ್ಚಲು ಕೊಯ್ದವನು ತನಗೆ ಎದೆ ಹಾಲು ಕೊಟ್ಟು ಬೆಳೆಸಿದ ತಾಯಿಯ ಎದೆಯನ್ನೇ ಕಟ್ ಮಾಡಬೇಕಿತ್ತು. ಇಂಥಾ ನನ್ಮಕ್ಳು ಸ್ಯಾಡಿಸ್ಟ್ ನನ್ಮಕ್ಳು.

ಇಂತಹವರನ್ನೆಲ್ಲಾ ವಿದೇಶದಲ್ಲಿ ಮಾಡುವ ಹಾಗೆ ಕಂಡಲ್ಲಿ ಗುಂಡಿಕ್ಕಿ ಸಾಯಿಸಿಬಿಡಬೇಕು. ಆದರೆ ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ. ನಮ್ಮ ಕರ್ನಾಟಕ ಪೊಲೀಸರು ಸ್ಟ್ರಾಂಗ್ ಆಗಿದ್ದಾರೆ. ಸಾಮಾನ್ಯವಾಗಿ ಇಂತಹವರನ್ನು ಒಳಗೆ ಹಾಕುವಾಗ ಪೊಲೀಸರು ಸ್ವಲ್ಪ ‘ಸ್ವೀಟ್’ ತಿನ್ನಿಸಿ ಒಳಗೆ ಕಳಿಸ್ತಾರೆ. ಇವನಿಗೆ ಇನ್ನೂ ಸ್ವಲ್ಪ ಜಾಸ್ತಿ ತಿನಿಸಿ ಕಳುಹಿಸಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಪ್ರೇಮ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ರು ಖಡಕ್ ರಿಪ್ಲೈ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಮುಂದಿನ ಸುದ್ದಿ
Show comments