Select Your Language

Notifications

webdunia
webdunia
webdunia
webdunia

ಅಡಿಕೆ ಮರ ಹತ್ತಿದ ದಿಗಂತ್: ಅಡಿಕೆ ಸುಲಿದ ರಂಜಿನಿ ರಾಘವನ್ ಫೋಟೋ ವೈರಲ್

ಅಡಿಕೆ ಮರ ಹತ್ತಿದ ದಿಗಂತ್: ಅಡಿಕೆ ಸುಲಿದ ರಂಜಿನಿ ರಾಘವನ್ ಫೋಟೋ ವೈರಲ್
ಬೆಂಗಳೂರು , ಬುಧವಾರ, 2 ಡಿಸೆಂಬರ್ 2020 (10:24 IST)
ಬೆಂಗಳೂರು: ಸದ್ಯಕ್ಕೆ ತಮ್ಮ ತವರಿನಲ್ಲಿರುವ ನಟ ದಿಗಂತ್ ಮಂಚಾಲೆ ಅಡಿಕೆ ಮರ ಹತ್ತಿ ಕೊನೆ ಕೊಯ್ಲು ಪೂರ್ತಿ ಮಾಡಿದ್ದಾರೆ! ಇತ್ತ ಇದೇ ನಟಿ ರಂಜಿನಿ ರಾಘವನ್ ಅಡಿಕೆ ಸುಲಿಯುವ ಮಣೆ ಮೇಲೆ ಪಟ್ಟಾಗಿ ಕೂತು ಅಡಿಕೆ ಸುಲಿದು ಸುದ್ದಿ ಮಾಡಿದ್ದಾರೆ!


ಅಷ್ಟಕ್ಕೂ ಇಬ್ಬರೂ ಈ ಕೆಲಸ ಮಾಡಿರುವುದು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಸಿನಿಮಾ ಶೂಟಿಂಗ್ ಗಾಗಿ. ದಿಗಂತ್ ಜತೆಗೆ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ದಿಗಂತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಡಿಕೆ ಕೊಯ್ದು ಗೊನೆ ಸಮೇತ ಫೋಟೋ ಪ್ರಕಟಿಸಿದ್ದು, ಕೊನೆ ಕೊಯ್ಲು ಮುಗಿದಿದೆ ಎಂದು ಬರೆದುಕೊಂಡಿದ್ದಾರೆ. ಅತ್ತ ರಂಜಿನಿ ಅಡಿಕೆ ಸುಲಿಯುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಅಂದ ಹಾಗೆ ಈ ಸಿನಿಮಾ ತೀರ್ಥಹಳ್ಳಿಯ ಸುತ್ತಮುತ್ತ ನಡೆಯುತ್ತಿರುವ ಕತೆಯಾಗಿದ್ದು, ಪಕ್ಕಾ ಹಳ್ಳಿ ಕೃಷಿಕರ ಕತೆ ಒಳಗೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹರಿಕತೆ ಸಿನಿಮಾದಿಂದ ಹೊರಬಂದ ನಿರ್ದೇಶಕ ಗಿರಿಕೃಷ್ಣ