Select Your Language

Notifications

webdunia
webdunia
webdunia
webdunia

ಹರ್ಷನ ಕುಟುಂಬಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹಾಯ

ಹರ್ಷನ ಕುಟುಂಬಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹಾಯ
ಶಿವಮೊಗ್ಗ , ಭಾನುವಾರ, 27 ಫೆಬ್ರವರಿ 2022 (17:57 IST)
ಶಿವಮೊಗ್ಗ: ಇತ್ತೀಚೆಗಷ್ಟೇ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹಾಯ ಮಾಡಿದ್ದಾರೆ.

ಸ್ನೇಹಿತ ಪ್ರಥಮ್ ಮೂಲಕ ಧ್ರುವ ಸರ್ಜಾ ಹರ್ಷ ಅವರ ತಾಯಿಗೆ ಧನ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಖುದ್ದು ಪ್ರಥಮ್ ಮಾಧ‍್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಹರ್ಷ ಅವರನ್ನು ವಾಪಸ್ ತಂದುಕೊಡಲಂತೂ ನಮ್ಮಿಂದ ಸಾಧ‍್ಯವಿಲ್ಲ. ಆದರೆ ನಾವು ಏನಾದರೂ ಮಾಡಬೇಕು. ಒಂದು ನಾಲ್ಕೈದು ಲಕ್ಷ ಹಣ ಕೊಡೋಣ, ಅವರಿಗೆ ಸಹಾಯವಾಗುತ್ತದೆ ಎಂದು ಧ್ರುವ ಸರ್ಜಾ ಹೇಳಿದರು. ಅವರು ಶೂಟಿಂಗ್ ನಲ್ಲಿರುವ ಕಾರಣ ನೇರವಾಗಿ ಭೇಟಿಯಾಗಲು ಸಾಧ‍್ಯವಾಗಲಿಲ್ಲ. ಹೀಗಾಗಿ ನನ್ನ ಕೈಲಿ ಕ್ಯಾಶ್ ಕೊಟ್ಟರು. ಇದರಿಂದ ಹರ್ಷ ಕುಟುಂಬಕ್ಕೆ ಸ್ವಲ್ಪ ಧೈರ್ಯ ಬರಬಹುದು ಎಂಬ ನಂಬಿಕೆ ನಮ್ಮದು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಷ್ ಸ್ಮಾರಕಕ್ಕೆ ಭೂಮಿ ಪೂಜೆ: ಭಾವುಕರಾದ ಸುಮಲತಾ