Select Your Language

Notifications

webdunia
webdunia
webdunia
webdunia

ಬ್ರೇಕ್ ನ ನಂತರ ಇಂದು ಮತ್ತೆ ಮಂಡ್ಯದಲ್ಲಿ ಯಶ್, ದರ್ಶನ್ ಪ್ರಚಾರ

ಬ್ರೇಕ್ ನ ನಂತರ ಇಂದು ಮತ್ತೆ ಮಂಡ್ಯದಲ್ಲಿ ಯಶ್, ದರ್ಶನ್ ಪ್ರಚಾರ
ಮಂಡ್ಯ , ಮಂಗಳವಾರ, 9 ಏಪ್ರಿಲ್ 2019 (10:04 IST)
ಮಂಡ್ಯ: ಯುಗಾದಿ ಹಬ್ಬದ ನಿಮಿತ್ತ ಚುನಾವಣಾ ಪ್ರಚಾರದಿಂದ ಎರಡು ದಿನ ಹಿಂದೆ ಸರಿದಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ಇಂದಿನಿಂದ ಮತ್ತೆ ಪ್ರಚಾರ ಶುರು ಮಾಡಲಿದ್ದಾರೆ.


ದರ್ಶನ್ ನಿನ್ನೆಯೇ ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದ್ದರು. ಆದರೆ ಇಂದಿನಿಂದ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಲಿದ್ದಾರೆ.

ಯಶ್ ಮತ್ತು ದರ್ಶನ್ ಇಂದು ಮಂಡ್ಯದ ಹಲವೆಡೆ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ ಮಳವಳ್ಳಿ ಸುತ್ತಮುತ್ತ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಕೂಡಾ ಪ್ರಚಾರ ನಡೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಯ ಹುಟ್ಟಿಸುವ ಸಿನಿಮಾ ಮಾಡುವ ರಾಮ್ ಗೋಪಾಲ್ ವರ್ಮಾಗೇ ಭಯ ಹುಟ್ಟಿಸಿದ ಕಿಚ್ಚ ಸುದೀಪ್, ಅಮಿತಾಭ್ ಬಚ್ಚನ್!