Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ ಈ ನಡೆಯನ್ನು ಸಮರ್ಥಿಸಿಕೊಂಡ ಸುಮಲತಾ ಅಂಬರೀಶ್

ಸಿಎಂ ಕುಮಾರಸ್ವಾಮಿ ಈ ನಡೆಯನ್ನು ಸಮರ್ಥಿಸಿಕೊಂಡ ಸುಮಲತಾ ಅಂಬರೀಶ್
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (13:51 IST)
ಬೆಂಗಳೂರು : ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಮಂಡ್ಯದ ಕಾಲುವೆಗೆ ಹರಿಸಲು ಸಿಎಂ ಕುಮಾರಸ್ವಾಮಿ ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಸಿಎಂ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಹೌದು. ಸಿಎಂ ಕುಮಾರಸ್ವಾಮಿ ಕುಡಿಯೋದಕ್ಕೆಂದು ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಮಂಡ್ಯದ ಜನರ ಕೃಷಿ ಹಾಗೂ ಕುಡಿಯಲು ಕಾಲುವೆಗೆ ಹರಿಸಲು ಸೂಚನೆ ಕೊಟ್ಟಿದ್ದು, ಇದು ಮಗನ ಗೆಲುವಿಗಾಗಿ ಕುಮಾರಸ್ವಾಮಿ ಮಾಡಿರುವ ತಂತ್ರ  ಎಂಬ ಆರೋಪ ಕೇಳಿಬಂದಿದೆ.


ಆದರೆ ಈ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು ಮಾತ್ರ, ‘ಮೊದಲು ಈ ದೇಶದ ರೈತರು ಮುಖ್ಯ. ಅನ್ನ ಬೆಳೆಯೋ ರೈತರಿಗೆ ಮೊದಲ ಆದ್ಯತೆ ನೀಡಬೇಕು. ರೈತರಿಗೆ ನೀರು ನೀಡದಿದ್ದರೆ ನಮಗೆ ತಿನ್ನಲು ಆಹಾರ ಎಲ್ಲಿಂದ ಬರುತ್ತೆ? ರೈತರಿಲ್ಲ ಅಂದ್ರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಕ್ ​ಟಾಕ್​ ವಿಡಿಯೋ ಆ್ಯಪ್​ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್