ನಟ ದರ್ಶನ್ ಗೆ ಇಂದು ಶಸ್ತ್ರಚಿಕಿತ್ಸೆ: ಜೈಲಿಗೆ ಹೋಗದಂತೆ ಇದೇ ಅಸ್ತ್ರವಾಗುತ್ತಾ

Krishnaveni K
ಬುಧವಾರ, 11 ಡಿಸೆಂಬರ್ 2024 (10:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್ ಗೆ ಇಂದು ಬೆನ್ನುಹುರಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯಲಿದ್ದು ಇದುವೇ ಅವರಿಗೆ ಮುಂದೆ ಜಾಮೀನು ಸಿಗಲೂ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ನಟ ದರ್ಶನ್ ಗೆ ತೀವ್ರ ಬೆನ್ನು ನೋವಿರುವ ಕಾರಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇರುವ ದರ್ಶನ್ ಗೆ ಇದುವರೆಗೆ ಶಸ್ತ್ರಚಿಕಿತ್ಸೆಯಾಗಿರಲಿಲ್ಲ. ಇದರ ಬಗ್ಗೆ ನ್ಯಾಯಾಲಯಕ್ಕೆ ಪೊಲೀಸರು ಆಕ್ಷೇಪಣೆಯನ್ನೂ ಸಲ್ಲಿಸಿದ್ದರು. ಆದರೆ ಬಿಪಿ ಹೆಚ್ಚು ಕಡಿಮೆಯಾಗುತ್ತಿದ್ದುದರಿಂದ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದು ದರ್ಶನ್ ಪರ ವಕೀಲರು ವರದಿ ನೀಡಿದ್ದರು.

ಇದೀಗ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಇದರ ಜೊತೆಗೆ ದರ್ಶನ್ ಮಧ್ಯಂತರ ಜಾಮೀನು ವಿಸ್ತರಣೆಯಾಗಿದೆ. ಇನ್ನೊಂದೆಡೆ ಅವರ ನಾರ್ಮಲ್ ಜಾಮೀನು ಅರ್ಜಿಯ ತೀರ್ಪು ಪ್ರಕಟಣೆಯನ್ನು ಹೈಕೋರ್ಟ್ ಕಾಯ್ದಿರಿಸಿದೆ. ಇಂದು ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್ ಗೆ ಈಗ ಇದುವೇ ವರದಾನವಾಗುವ ಸಾಧ್ಯತೆಯಿದೆ.

ಶಸ್ತ್ರಚಿಕಿತ್ಸೆ ಬಳಿಕ ಕೆಲವು ದಿನ ವಿಶ್ರಾಂತಿ ಅಗತ್ಯವಿರುತ್ತದೆ. ಹೀಗಾಗಿ ಇದೇ ಕಾರಣವನ್ನಿಟ್ಟುಕೊಂಡು ಮತ್ತಷ್ಟು ದಿನಗಳ ಕಾಲ ಜಾಮೀನು ವಿಸ್ತರಣೆಗೆ ಅವಕಾಶ ಕೇಳಬಹುದು. ಇದರ ನಡುವೆ ಮಾಮೂಲಿ ಜಾಮೀನು ಕೂಡಾ ಇದೇ ನೆಪದಲ್ಲಿ ಸಿಕ್ಕರೂ ಅಚ್ಚರಿಯಿಲ್ಲ. ಹೀಗಾಗಿ ದರ್ಶನ್ ಗೆ ಈಗ ಶಸ್ತ್ರಚಿಕಿತ್ಸೆಯೇ ವರದಾನವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇದು ಆಘಾತದಿಂದ ಹೊರಬರಲು ಸಹಾಯ ಮಾಡಿತು: ಸುಶಾಂತ್ ರಜಪೂರ್ ನಿಧನದ ಬಗ್ಗೆ ರಿಯಾ ಚಕ್ರವರ್ತಿ

ಆಕೆ ನನ್ನ ಕಡೆಯಿಂದ ಒಂದು ರೂಪಾಯಿನೂ ಖರ್ಚು ಮಾಡಿಸಿಲ್ಲ, ಸುಶ್ಮಿತಾ ಸೇನ್ ಬಗ್ಗೆ ಕೇವಲವಾಗಿ ಮಾತನಾಡಿದವರಿಗೆ ಕೌಂಟರ್ ಕೊಟ್ಟ ಲಲಿತ್‌ ಮೋದಿ

ಭದ್ರತೆ ಉಲ್ಲಂಘಿಸಿ ರಾಮ್ ಚರಣ್‌ ಹತ್ತಿರ ಬಂದ ಫ್ಯಾನ್ಸ್‌ನನ್ನು ಸೆಕ್ಯೂರಿಟಿ ಕೆವಿನ್ ಹೇಗೆ ಎತ್ತಾಕಿಕೊಂಡು ಹೋದ್ರು ನೋಡಿ, Video

ವೈರಲ್ ಆಯ್ತು ನಟ ದರ್ಶನ್ ಲೇಟೆಸ್ಟ್ ಫೋಟೋ: ಹೆಂಗಿದ್ದವರು ಹಿಂಗಾದ್ರಲ್ಲಾ ಎಂದು ಬೇಸರಿಸಿದ ಫ್ಯಾನ್ಸ್

ಕರುಪ್ಪು ಸಕ್ಸಸ್‌ ಖುಷಿಯಲ್ಲಿ ಛಾಯಾಗ್ರಾಹಕನಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

ಮುಂದಿನ ಸುದ್ದಿ
Show comments