ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

Krishnaveni K
ಶುಕ್ರವಾರ, 31 ಅಕ್ಟೋಬರ್ 2025 (11:41 IST)
ಬೆಂಗಳೂರು: ಒಂದೆಡೆ ಮಗ ವಿನೇಶ್ ಬರ್ತ್ ಡೇ. ಇನ್ನೊಂದೆಡೆ ಕೋರ್ಟ್ ನಲ್ಲಿ ಅಗ್ನಿ ಪರೀಕ್ಷೆ. ನಟ ದರ್ಶನ್ ಗೆ ಒಂದೆಡೆ ಸಿಹಿ, ಇನ್ನೊಂದೆಡೆ ಆತಂಕ. ಒಟ್ಟಿನಲ್ಲಿ ದಾಸನಿಗೆ ಎದೆಯಲ್ಲಿ ಢವ ಢವ..

ಹುಟ್ಟುಹಬ್ಬದಂದು ಮಗನ ಜೊತೆಗಿರುವ ಭಾಗ್ಯ ದರ್ಶನ್ ಗಿಲ್ಲ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಹಕ್ಕಿಯಾಗಿರುವ ದರ್ಶನ್ ಮಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ಹಾಕಿ ಮಗನಿಗೆ ವಿಶ್ ಮಾಡಿದ್ದಾರೆ.

‘ಈ ಕೆಲವು ದಿನಗಳನ್ನು ನೀನು ಹೇಗೆ ಶಾಂತಚಿತ್ತದಿಂದ, ಕೇರ್ ಮತ್ತು ಧೈರ್ಯದಿಂದ ಎದುರಿಸಿದೆ ಎಂದು ನೋಡಿದರೆ ನನಗೆ ಹೆಮ್ಮೆಯಾಗುತ್ತಿದೆ. ನೀನು ಎಷ್ಟೇ ದೊಡ್ಡವನಾದರೂ ನನಗೆ ಪುಟ್ಟ ಕಂದ. ಜೀವನದಲ್ಲಿ ಎತ್ತರಕ್ಕೆ ಬೆಳೆ ಮಗನೇ. ನಾನು, ನಿನ್ನ ಅಪ್ಪ ಜೊತೆಗೇ ಇದ್ದೇವೆ ಎಂಬುದನ್ನು ಮರೆಯಬೇಡ’ ಎಂದು ವಿಜಯಲಕ್ಷ್ಮಿ ಮಗನಿಗೆ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದೆಡೆ ಮಗನನನ್ನು ಮಿಸ್ ಮಾಡಿಕೊಳ್ಳುತ್ತಿರುವ ಬೇಸರವಾದರೆ ಇನ್ನೊಂದೆಡೆ ದರ್ಶನ್ ಗೆ ಇಂದು ಕೋರ್ಟ್ ನಲ್ಲಿ ದೋಷಾರೋಪ ನಿಗದಿಯಾಗುವ ಟೆನ್ಷನ್. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ದೋಷಾರೋಪ ಇಂದು ಕೋರ್ಟ್ ನಲ್ಲಿ ನಿಗದಿಯಾಗಲಿದೆ. ಹೀಗಾಗಿ ಇಂದು ಎಲ್ಲಾ ಆರೋಪಿಗಳೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.

ಈ ವೇಳೆ ಎಲ್ಲಾ ಆರೋಪಿಗಳ ಮುಂದೆ ಅವರ ಮೇಲೆ ನಿಗದಿಯಾಗಿರುವ ಆರೋಪಗಳೇನು ಎಂದು ನ್ಯಾಯಾಧೀಶರು ಓದಲಿದ್ದು, ಬಳಿಕ ಅದನ್ನು ಅವರು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಲಿದ್ದಾರೆ. ಈ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡರೆ ಅದಕ್ಕೆ ತಕ್ಕ ಶಿಕ್ಷೆ ನಿಗದಿಯಾಗುತ್ತದೆ. ಒಪ್ಪದೇ ಹೋದರೆ ಮುಂದಿನ ಹಂತದಲ್ಲಿ ಪಟ್ಟಿಯಲ್ಲಿರುವ ಸಾಕ್ಷ್ಯಗಳ ವಿಚಾರಣೆ ನಡೆಯುತ್ತದೆ. ಹೀಗಾಗಿ ಇಂದು ದರ್ಶನ್ ಗೆ ಮಹತ್ವದ ದಿನವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

ಮುಂದಿನ ಸುದ್ದಿ
Show comments