ವಿಷ ಕೊಡಿ ಎಂದು ಅತ್ತು ಕರೆದಿದ್ದಕ್ಕೆ ನಟ ದರ್ಶನ್ ಗೆ ಸಿಕ್ತು ಜೈಲಿನಲ್ಲಿ ಈ ಗ್ಯಾರಂಟಿ

Krishnaveni K
ಗುರುವಾರ, 11 ಸೆಪ್ಟಂಬರ್ 2025 (09:37 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದ ಆರೋಪಿ ನಟ ದರ್ಶನ್ ಮೊನ್ನೆಯಷ್ಟೇ ನ್ಯಾಯಾಧೀಶರ ಮುಂದೆ ನನಗೆ ವಿಷ ಕೊಡಿ ಎಂದು ಕೇಳಿದ್ದರು. ಇದೀಗ ಅಷ್ಟು ಅತ್ತು ಕರೆದು ಮಾಡಿದ್ದಕ್ಕೆ ಒಂದು ಬೇಡಿಕೆ ಈಡೇರಿದೆ.

ನನಗೆ ಜೈಲಿನಲ್ಲಿ ನರಕಯಾತನೆ ಆಗುತ್ತಿದೆ. ಬಿಸಿಲು ಕಾಣದೇ ಒಂದು ತಿಂಗಳಾಗಿದೆ. ಕೈಯೆಲ್ಲಾ ಫಂಗಸ್ ಬಂದಿದೆ ಎಂದೆಲ್ಲಾ ದರ್ಶನ್ ಜಡ್ಜ್ ಮುಂದೆ ಅಲವತ್ತುಗೈದಿದ್ದರು. ಕೊನೆಗೂ ನ್ಯಾಯಾಧೀಶರು ಜೈಲಿನಲ್ಲಿ ಹಾಸಿಗೆ, ದಿಂಬು ಮತ್ತು ವಾಕಿಂಗ್ ಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದ್ದರು.

ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ದರ್ಶನ್ ಗೆ ಬೆಳಿಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್ ಮಾಡುವ ಅವಕಾಶ ನೀಡಿದ್ದಾರೆ. ದರ್ಶನ್ ಜೊತೆಗೆ ಬೇರೆಯವರು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಆ ಸಮಯದಲ್ಲಿ ದರ್ಶನ್ ಮಾತ್ರ ವಾಕಿಂಗ್ ಮಾಡಲಿದ್ದಾರೆ. ಅವರ ವಾಕಿಂಗ್ ಮುಗಿದ ಬಳಿಕವಷ್ಟೇ ಬೇರೆ ಕೈದಿಗಳಿಗೆ ವಾಕಿಂಗ್ ಅವಕಾಶ ಸಿಗಲಿದೆ. ದರ್ಶನ್ ವಾಕಿಂಗ್ ಮಾಡುವ ದೃಶ್ಯಗಳೂ ಸಿಸಿಟಿವಿಯಲ್ಲಿ ದಾಖಲಾಗುವಂತೆ ನೋಡಿಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments