Select Your Language

Notifications

webdunia
webdunia
webdunia
webdunia

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದವರ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್, ದರ್ಶನ್

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದವರ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್, ದರ್ಶನ್
ಬೆಂಗಳೂರು , ಭಾನುವಾರ, 27 ಡಿಸೆಂಬರ್ 2020 (09:35 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದಕ್ಕೂ ಮೊದಲು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಕೂಡಾ ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದರು. ಇದಾದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇಂತಹ ಹೇಯ ಕೃತ್ಯವೆಸಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದ್ದರು. ಇನ್ನು, ಕಿಚ್ಚ ಸುದೀಪ್ ವಿಡಿಯೋ ಮೂಲಕ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ‘ಈ ಪ್ರತಿಮೆ ಒಡೆದು ಹಾಕಿದವರು ಹೊರಗಡೆ ಅಪ್ಪಾಜಿ ಅಭಿಮಾನಿಗಳಿಗೆ ಸಿಕ್ಕಿಹಾಕಿಕೊಳ್ಬೇಡಿ. ಸಿಕ್ಕಿ ಹಾಕಿಕೊಂಡ್ರೆ ಅಪ್ಪಾಜಿಯ ಅಭಿಮಾನಿಗಳು ಏನು ಮಾಡ್ತಾರಂತೆ ಹೇಳಕ್ಕೂ ಆಗಲ್ಲ. ಒಬ್ಬ ಮನುಷ್ಯ ಮಾಡೋ ಕೆಲಸ ಅಲ್ಲ ಇದು’ ಎಂದು ಸುದೀಪ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2021ಕ್ಕೆ ಬಿಡುಗಡೆಯಾಗಲಿರುವ ದಕ್ಷಿಣ ಭಾರತದ ಚಿತ್ರಗಳು ಯಾವುವು ಗೊತ್ತಾ?