Select Your Language

Notifications

webdunia
webdunia
webdunia
webdunia

ಹೊರಗಡೆ ಕೈಗೊಬ್ಬ ಕಾಲಿಗೊಬ್ಬ ಆಳು, ಜೈಲಲ್ಲಿ ದರ್ಶನ್ ಗೆ ಬಟ್ಟೆ ತೊಳಿ, ಗುಡಿಸುವ ಕೆಲಸ

Darshan Thoogudeepa

Krishnaveni K

ಬಳ್ಳಾರಿ , ಶನಿವಾರ, 14 ಸೆಪ್ಟಂಬರ್ 2024 (13:06 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಈಗ ಜೈಲಿನಲ್ಲಿ ಪಕ್ಕಾ ಸಾಮಾನ್ಯನ ಬದುಕು ಬದುಕುತ್ತಿದ್ದಾರೆ. ಹೊರಗಡೆ ವಿಐಪಿಯಂತಿದ್ದ ದರ್ಶನ್ ಈಗ ಜೈಲೊಳಗೆ ಸಾಮಾನ್ಯ ಖೈದಿಯಾಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇದೇ ತಪ್ಪಿಗೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಮೇಲೆ ಅಧಿಕಾರಿಗಳೂ ಜಾಗೃತರಾಗಿದ್ದಾರೆ. ಯಾವುದೇ ಕಾರಣಕ್ಕೂ ದರ್ಶನ್ ಗೆ ವಿಶೇಷ ಸೌಲಭ್ಯ ಸಿಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ.

ಆದರೆ ದರ್ಶನ್ ಜೈಲಿನಲ್ಲಿ ಟಿವಿಗೆ ಬೇಡಿಕೆಯಿಟ್ಟಿದ್ದರು. ಅದರಂತೆ ಇದ್ದ ಟಿವಿಗಳಲ್ಲೇ ಒಂದನ್ನು ರಿಪೇರಿ ಮಾಡಿಸಿಕೊಟ್ಟರೂ ಅದು ಎರಡೇ ದಿನಕ್ಕೆ ಹಾಳಾಯಿತು. ಹೀಗಾಗಿ ದರ್ಶನ್ ಸಿಟ್ಟಾಗಿದ್ದರು. ನಾನು ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಟಿವಿ ಯಾಕೆ ಕೊಡುತ್ತಿಲ್ಲ ಎಂದು ಕಿರಿಕ್ ತೆಗೆದಿದ್ದರು. ಇದರ ಬೆನ್ನಲ್ಲೇ ಅವರಿಗೆ ಜೈಲು ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಈಗ ದರ್ಶನ್ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬ ವಿಚಾರವೂ ಹೊರಗೆ ಬಿದ್ದಿದೆ. ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಕಾಲ ಕಳೆಯುತ್ತಿರುವ ದರ್ಶನ್ ಇಲ್ಲಿ ಅನಿವಾರ್ಯವಾಗಿ ಇಲ್ಲಿ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದಾರೆ. ತಮ್ಮ ಕೊಠಡಿಯನ್ನು ತಾವೇ ಗುಡಿಸಿ ಶುಚಿಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಜೈಲಿನಲ್ಲಿ ನೀಡುವ ಊಟವನ್ನೇ ಸೇವಿಸಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಯಸ್ಸಿನಲ್ಲಿ ಗರ್ಭಿಣಿನಾ: ಹಿರಿಯ ನಟಿ ಸುಧಾರಾಣಿ ಫ್ಯಾನ್ಸ್ ಗೆ ಬೇಸರವಾಗಿದ್ದು ಯಾಕೆ