Select Your Language

Notifications

webdunia
webdunia
webdunia
webdunia

ಮತ್ತೊಂದು ಜೈಲಿಗೆ ಹೋದ್ರೂ ತಾನು ಕಿಂಗ್ ಎಂದು ತೋರಿಸಿದ ದರ್ಶನ್

Darshan

Krishnaveni K

ಬಳ್ಳಾರಿ , ಗುರುವಾರ, 29 ಆಗಸ್ಟ್ 2024 (11:21 IST)
ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ತಾವು ಎಲ್ಲಿದ್ದರೂ ಕಿಂಗ್ ಎನ್ನುವ ಸಂದೇಶ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿಲಾಸೀ ಜೀವನ ನಡೆಸುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಮತ್ತೆ ಎರಡು ಪ್ರಕರಣ ದಾಖಲಾಗಿತ್ತು. ಇದೇ ತಪ್ಪಿಗೆ ಅವರನ್ನು ಕೋರ್ಟ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿತ್ತು.

ಅದರಂತೆ ಇಂದು ಬೆಳ್ಳಂ ಬೆಳಿಗ್ಗೆಯೇ ಪೊಲೀಸರು ಅವರನ್ನು ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಕರೆತಂದಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹದ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಜಮಾಯಿಸಿದ್ದರು. ಪೊಲೀಸ್ ವಾಹನದಿಂದಿಳಿದ ದರ್ಶನ್ ನೇರವಾಗಿ ಜೈಲು ಪ್ರವೇಶ ಮಾಡಿದ್ದಾರೆ.

ಈ ವೇಳೆ ಅವರ ಗತ್ತು ನೋಡಿ ಅಭಿಮಾನಿಗಳು ಎಲ್ಲೇ ಹೋದರೂ ರಾಜ ರಾಜನಂತೇ ಇರುತ್ತಾರೆ ಎಂದಿದ್ದಾರೆ. ಜೈಲಿಗೆ ಹೋಗುವಾಗಲೂ ಬ್ರ್ಯಾಂಡೆಡ್ ಟಿ ಶರ್ಟ್, ಸನ್ ಗ್ಲಾಸ್ ಹಾಕಿಕೊಂಡು ಗತ್ತಿನಿಂದಲೇ ಒಳ ಹೋಗಿದ್ದಾರೆ. ಈ ಹಿಂದೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ಜೈಲಿನೊಳಗೆ ಹೆಜ್ಜೆ ಹಾಕಿದ್ದಾರೆ. ದರ್ಶನ್ ಕೂದಲು ಹೆಚ್ಚು ಕಡಿಮೆ ಉದುರಿ ಹೋಗಿದ್ದು, ಇಂದು ತಮಗೆ ಜೈಕಾರ ಹಾಕುತ್ತಿದ್ದ ಅಭಿಮಾನಿಗಳತ್ತ ತಿರುಗಿಯೂ ನೋಡದೇ ಜೈಲಿನೊಳಗೆ ಹೋಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಫ್ಯಾನ್ಸ್ ಕಾಯುತ್ತಿದ್ದ ಆ ಗಳಿಗೆ ಇಂದು ಬಂದೇ ಬಿಟ್ಟಿತು