Webdunia - Bharat's app for daily news and videos

Install App

ನಾನ್ ವೆಜ್ ಇಲ್ಲದೇ ಒಂದು ದಿನ ಇರಕ್ಕಾಗಲ್ಲ ಎಂದಿದ್ದ ದರ್ಶನ್

Krishnaveni K
ಶುಕ್ರವಾರ, 21 ಜೂನ್ 2024 (12:19 IST)
ಬೆಂಗಳೂರು: ನಟ ದರ್ಶನ್ ವೃತ್ತಿ ಜೀವನದಲ್ಲಿ ಸಕ್ಸಸ್ ಕಂಡ ಮೇಲೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಅವರು ಆಹಾರ ಪ್ರಿಯ, ಅದರಲ್ಲೂ ನಾನ್ ವೆಜ್ ಎಂದರೆ ಬಲು ಪ್ರೀತಿ.

ಇದನ್ನು ಅವರೇ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತಮ್ಮ ಕಷ್ಟದ ದಿನಗಳಲ್ಲಿ ತಾಯಿ ಹೇಗೋ ಕಷ್ಟಪಟ್ಟು ಹಣ ಕೂಡಿಟ್ಟು ಚಿಕನ್ ಅಥವಾ ಮಟನ್ ಖರೀದಿಸಿ ವಾರಕ್ಕೊಮ್ಮೆ ಮಾಡಿ ಹಾಕುತ್ತಿದ್ದರು ಎಂದಿದ್ದರು.

ಬಳಿಕ ಸಂದರ್ಶನವೊಂದರಲ್ಲಿ ನನಗೆ ಪ್ರತಿನಿತ್ಯ ನಾನ್ ವೆಜ್ ಬೇಕೇ ಬೇಕು. ಇಲ್ಲಾಂದ್ರೆ ಆಗಲ್ಲ. ನಂಗೆ ವೆಜ್ ಬೇಡ ಸಾರ್ ಎಂದಿದ್ದರು. ಅದರಲ್ಲೂ ಮಟನ್, ಚಿಕನ್ ಬಿರಿಯಾನಿ ಎಂದರೆ ಅವರಿಗೆ ತುಂಬಾ ಇಷ್ಟ. ನಾನ್ ವೆಜ್ ಇಲ್ಲದೇ ದಿನ ಕಳೆಯದ ದರ್ಶನ್ ಈಗ ಇದೆಲ್ಲವನ್ನೂ ಮರೆಯಬೇಕಿದೆ.

ಸದ್ಯಕ್ಕೆ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಎರಡು ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಅದಾದ ಬಳಿಕ ಅವರಿಗೂ ಸಾಮಾನ್ಯ ಕೈದಿಗಳಿಗೆ ನೀಡುವಂತೆ ಅನ್ನ, ಸಾರು, ಮುದ್ದೆ, ರೈಸ್ ಬಾತ್ ಹೀಗೆ ಜೈಲಿನಲ್ಲಿ ತಯಾರಿಸುವ ಆಹಾರವನ್ನೇ ನೀಡಲಾಗುತ್ತದೆ. ಪ್ರತಿನಿತ್ಯ ಮಾಂಸದೂಟ ಮಾಡುತ್ತಿದ್ದ ದರ್ಶನ್ ಇನ್ಮುಂದೆ ಎಲ್ಲಾ ಮರೆತು ಜೈಲೂಟ ಮಾಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಮುಂದಿನ ಸುದ್ದಿ
Show comments