Select Your Language

Notifications

webdunia
webdunia
webdunia
webdunia

ವರ್ಷವಿಡೀ ಊಟ ಹಾಕೋರಿಗೆ ವರ್ಷಕ್ಕೊಂದು ಸಾರಿ ಊಟ ಹಾಕಕ್ಕಾಗಲ್ವಾ? ಅಭಿಮಾನಿಗಳ ಬಗ್ಗೆ ದರ್ಶನ್ ಮಾತು

ವರ್ಷವಿಡೀ ಊಟ ಹಾಕೋರಿಗೆ ವರ್ಷಕ್ಕೊಂದು ಸಾರಿ ಊಟ ಹಾಕಕ್ಕಾಗಲ್ವಾ? ಅಭಿಮಾನಿಗಳ ಬಗ್ಗೆ ದರ್ಶನ್ ಮಾತು
ಬೆಂಗಳೂರು , ಮಂಗಳವಾರ, 26 ಫೆಬ್ರವರಿ 2019 (10:04 IST)
ಬೆಂಗಳೂರು: ಯಜಮಾನ ರಿಲೀಸ್ ಗೆ ರೆಡಿಯಾಗಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ.


ಮೊನ್ನೆಯಷ್ಟೇ ತಮ್ಮ ಜನ್ಮದಿನದ ಪ್ರಯುಕ್ತ ದರ್ಶನ್ ತಮ್ಮ ಮನೆಗೆ ಶುಭ ಹಾರೈಸಲು ಬಂದ ಅಭಿಮಾನಿಗಳಿಗೆ ಊಟ ಹಾಕಿ ಕಳುಹಿಸಿದ್ದನ್ನು ಓದಿರುತ್ತೀರಿ. ಆ ಬಗ್ಗೆ ದರ್ಶನ್ ಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು.

ಅದಕ್ಕೆ ಉತ್ತರಿಸಿದ ದರ್ಶನ್ ‘ವರ್ಷದ 365 ದಿನವೂ ನನಗೆ ಊಟ ಹಾಕುವವರಿಗೆ ವರ್ಷಕ್ಕೊಂದು ಬಾರಿ ನಾನು ಊಟ ಹಾಕಕ್ಕಾಗಲ್ವಾ? ಅವರಿಂದಲೇ ನಾನು. ನಾನೇನು ಗಳಿಸಿದರೂ ಅದು ಅವರು ಕೊಟ್ಟ ಭಿಕ್ಷೆ’ ಎಂದಿದ್ದಾರೆ. ದರ್ಶನ್ ಹುಟ್ಟು ಹಬ್ಬದಂದು ಕೇಕ್ ಬದಲು ಧವಸ ಧಾನ್ಯ ತನ್ನಿ, ಅದನ್ನು ಆಶ್ರಮ, ಮಠಗಳಿಗೆ ದಾನ ಮಾಡೋಣ ಎಂದು ಕರೆಕೊಟ್ಟಿದ್ದರು. ದರ್ಶನ್ ಕರೆಗೆ ಸ್ಪಂದಿಸಿದ ಅಭಿಮಾನಿಗಳು ಅವರು ಹೇಳಿದಂತೆ ನಡೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡ್ಗಿಚ್ಚು ನಂದಿಸಲು ಪತ್ನಿ ಸಮೇತ ಕಾಡಿಗೆ ತೆರಳಿದ ದುನಿಯಾ ವಿಜಯ್