Publish Date: Tue, 26 Feb 2019 (10:04 IST)
Updated Date: Tue, 26 Feb 2019 (10:05 IST)
ಬೆಂಗಳೂರು: ಯಜಮಾನ ರಿಲೀಸ್ ಗೆ ರೆಡಿಯಾಗಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ.
ಮೊನ್ನೆಯಷ್ಟೇ ತಮ್ಮ ಜನ್ಮದಿನದ ಪ್ರಯುಕ್ತ ದರ್ಶನ್ ತಮ್ಮ ಮನೆಗೆ ಶುಭ ಹಾರೈಸಲು ಬಂದ ಅಭಿಮಾನಿಗಳಿಗೆ ಊಟ ಹಾಕಿ ಕಳುಹಿಸಿದ್ದನ್ನು ಓದಿರುತ್ತೀರಿ. ಆ ಬಗ್ಗೆ ದರ್ಶನ್ ಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು.
ಅದಕ್ಕೆ ಉತ್ತರಿಸಿದ ದರ್ಶನ್ ‘ವರ್ಷದ 365 ದಿನವೂ ನನಗೆ ಊಟ ಹಾಕುವವರಿಗೆ ವರ್ಷಕ್ಕೊಂದು ಬಾರಿ ನಾನು ಊಟ ಹಾಕಕ್ಕಾಗಲ್ವಾ? ಅವರಿಂದಲೇ ನಾನು. ನಾನೇನು ಗಳಿಸಿದರೂ ಅದು ಅವರು ಕೊಟ್ಟ ಭಿಕ್ಷೆ’ ಎಂದಿದ್ದಾರೆ. ದರ್ಶನ್ ಹುಟ್ಟು ಹಬ್ಬದಂದು ಕೇಕ್ ಬದಲು ಧವಸ ಧಾನ್ಯ ತನ್ನಿ, ಅದನ್ನು ಆಶ್ರಮ, ಮಠಗಳಿಗೆ ದಾನ ಮಾಡೋಣ ಎಂದು ಕರೆಕೊಟ್ಟಿದ್ದರು. ದರ್ಶನ್ ಕರೆಗೆ ಸ್ಪಂದಿಸಿದ ಅಭಿಮಾನಿಗಳು ಅವರು ಹೇಳಿದಂತೆ ನಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.