Webdunia - Bharat's app for daily news and videos

Install App

ಹೆಂಡತಿ ತಂದುಕೊಟ್ಟ ಬ್ಯಾಗ್ ಎತ್ತಿಕೊಳ್ಳಲೂ ಆಗದಷ್ಟು ದರ್ಶನ್ ಗೆ ಬೆನ್ನು ನೋವು

Krishnaveni K
ಸೋಮವಾರ, 7 ಅಕ್ಟೋಬರ್ 2024 (16:09 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವು ಕಾಡುತ್ತಿದೆ ಎಂದು ವರದಿಯಾಗುತ್ತಲೇ ಇದೆ. ಇದೀಗ ಕ್ಯಾಮರಾಗಳ ಮುಂದೆಯೇ ಅವರು ನೋವು ಅನುಭವಿಸುತ್ತಿರುವ ದೃಶ್ಯ ಸೆರೆಯಾಗಿದೆ.

ಬೆನ್ನು ನೋವಿನಿಂದ ಬಳಲುತ್ತಿರುವ ಪತಿ ದರ್ಶನ್ ನೋಡಲು ಇಂದು ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಈ ವೇಳೆ ಎಂದಿನಂತೆ ಪತಿಗಾಗಿ ಡ್ರೈ ಫ್ರೂಟ್ಸ್, ಬಟ್ಟೆ ಇರುವ ಬ್ಯಾಗ್ ತಂದಿದ್ದಾರೆ. ಪತ್ನಿ ಕೊಟ್ಟ ಬ್ಯಾಗ್ ತೆಗೆದುಕೊಂಡು ದರ್ಶನ್ ಜೈಲು ಒಳಗೆ ಹೋಗುವಾಗ ನೋವಿನಿಂದ ಒದ್ದಾಡಿದ್ದಾರೆ.

ಜೈಲಿನ ಬಾಗಿಲ ಬಳಿಯೇ ನೋವು ತಡೆಯಲಾಗದೇ ಬ್ಯಾಗ್ ಕೆಳಗಿಟ್ಟು ನೋವಿನಿಂದ ಮುಖ ಕಿವುಚಿಕೊಂಡಿದ್ದಾರೆ. ಮತ್ತೆ ಕಷ್ಟಪಟ್ಟು ತಮ್ಮ ಬ್ಯಾಗ್ ಹಿಡಿದುಕೊಂಡು ಒಳಗೆ ಹೋಗಿದ್ದಾರೆ. ಈ ದೃಶ್ಯಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದರ್ಶನ್ ಎಷ್ಟು ನೋವು ಅನುಭವಿಸುತ್ತಿದ್ದಾರೆ ಎನ್ನುವುದು ಕನ್ ಫರ್ಮ್ ಆಗಿದೆ.

ದರ್ಶನ್ ಪರೀಕ್ಷಿಸಿದ್ದ ವೈದ್ಯರು ಈಗಾಗಲೇ ಸ್ಕ್ಯಾನಿಂಗ್ ಮತ್ತು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು. ಆದರೆ ಏನೇ ಆದರೂ ಬೆಂಗಳೂರಿಗೆ ಹೋಗಿಯೇ ಶಸ್ತ್ರಚಿಕಿತ್ಸೆ ಮತ್ತು ಸ್ಕ್ಯಾನಿಂಗ್ ಮಾಡಿಸುವುದಾಗಿ ದರ್ಶನ್ ಹಠ ಹಿಡಿದು ಕುಳಿತಿದ್ದಾರೆ. ಸದ್ಯಕ್ಕೆ ಅವರು ನೋವು ನಿವಾರಕ ಗುಳಿಗೆ ಸೇವಿಸುತ್ತಿದ್ದಾರೆ. ಆದರೆ ಅದು ಫಲಕೊಡುತ್ತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments