Publish Date: Mon, 14 Oct 2024 (18:44 IST)
Updated Date: Mon, 14 Oct 2024 (19:04 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ಗೆ ಮತ್ತೇ 15 ದಿನ ಜೈಲೇ ಗತಿಯಾಗಿದೆ.
ಫ್ಯಾನ್ ಹಾಗೂ ಕುಟುಂಬದವರು ಇಂದು ದರ್ಶನ್ಗೆ ಜಾಮೀನು ಸಿಗಬಹುದು ಎಂದು ಅಂದುಕೊಂಡಿದ್ದರು. ಅದಲ್ಲದೆ ವಿಜಯದಶಮಿಯೊಳಗೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುತ್ತಾರೆಂಬ ಸುದ್ದಿಯೂ ಚರ್ಚೆಯಾಗಿತ್ತು.
ಇದೀಗ ದರ್ಶನ್ ಅವರ ಬೇಲ್ ಅರ್ಜಿ ವಜಾ ಆಗುತ್ತಿದ್ದ ಹಾಗೇ ವ್ಯಕ್ತಿಯೊಬ್ಬರು ಹೇಳಿರುವ ಭವಿಷ್ಯ ಇದೀಗ ವೈರಲ್ ಆಗಿದೆ.
ಪ್ರೀತಂ ಕೆಮ್ಮಾಯಿ ಎಂಬುವವರು ತಮ್ಮ ಫೇಸ್ಬುಕ್ನಲ್ಲಿ ದರ್ಶನ್ ಜಾಮೀನು ತೀರ್ಪಿಗೂ ಮುನ್ನಾ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ದರ್ಶನ್ ಮಕರ ರಾಶಿ, ಇವತ್ತು ಶನಿ ಚಂದ್ರ ಸಂಯೋಜನೆ. ಶತ್ರು ಭಾವದಲ್ಲಿ ಕುಜ ಸಂಚಾರ. ಮಾನಸಿಕ ನೆಮ್ಮದಿ ಇರೋದಿಲ್ಲ. ಬೇಲ್ ಸಿಗೋದಿಲ್ಲ ಎಂದು ಬರೆದುಕೊಂಡಿದ್ದರು.
ಇದೀಗ ಅವರ ಪೋಸ್ಟ್ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣಕ್ಕೆ ಒಳಪಟ್ಟಿದೆ.