Select Your Language

Notifications

webdunia
webdunia
webdunia
webdunia

ಆ ಒಂದು ಗಳಿಗೆಯಲ್ಲಿ ಗಾಢವಾಗಿತ್ತು ದರ್ಶನ್, ಪವಿತ್ರಾ ಗೌಡ ಸಂಬಂಧ

ಆ ಒಂದು ಗಳಿಗೆಯಲ್ಲಿ ಗಾಢವಾಗಿತ್ತು ದರ್ಶನ್, ಪವಿತ್ರಾ ಗೌಡ ಸಂಬಂಧ

sampriya

ಬೆಂಗಳೂರು , ಶನಿವಾರ, 15 ಜೂನ್ 2024 (19:56 IST)
Photo By Instagram
ಬೆಂಗಳೂರು: ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಎ 1 ಆರೋಪಿಯಾಗಿರುವ ನಟ ದರ್ಶನ್‌ ಅವರ ಬಹುಕಾಲದ ಗೆಳತಿ ಪವಿತ್ರಾ ಗೌಡ ಅವರ ಹಿನ್ನೆಲೆ ಹೀಗಿದೆ. ಫ್ಯಾಶನ್ ಡಿಸೈನರ್, ಮಾಡೆಲ್, ಕಲಾವಿದೆ ಮತ್ತು ಬೊಟಿಕ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಪವಿತ್ರಾ ಗೌಡ ಅವರು ದರ್ಶನ್‌ ಅವರ ಗೆಳೆತನದಿಂದ ಸ್ಯಾಂಡಲ್‌ವುನಲ್ಲಿ ಖ್ಯಾತಿ ಗಳಿಸಿದವರು.

ಪವಿತ್ರಾ ಗೌಡ ಅವರ ಮೊದಲು ಸಿನಿಮಾ ರಂಗದಲ್ಲಿ ತಮ್ಮ ಬದುಕನ್ನು ಆರಂಭಿಸಲು ಕನಸ್ಸು ಕಟ್ಟಿಕೊಂಡವರು. ಆದರೆ  ಯಾವುದೇ ಆಫರ್ ಬರದ ಕಾರಣ ಸಂಜಯ್ ಎಂಬವರನ್ನು ಪ್ರೀತಿ ಮಾಡಿ ಪವಿತ್ರಾ ಗೌಡ ಅವರು ಮದುವೆಯಾದರು.

ಈ ದಂಪತಿಗೆ  ಖುಷಿ ಗೌಡ ಎಂಬ ಮಗಳಿದ್ದಾಳೆ. ಆದರೆ ಮಗು ಆದ ಬಳಿಕ ಸಿನಿಮಾ ರಂಗದಲ್ಲಿ ಒಂದೊಂದು ಆಫರ್‌ ಸಿಗಲು ಶುರುವಾಯಿತು. ಇದರಿಂದ ಗಂಡ ಹೆಂಡತಿ ನಡುವಿನಲ್ಲಿ ಭಿನ್ನಭಿಪ್ರಾಯ ಶುರುವಾಯಿತು. ಕೊನೆಗೂ ಈ ದಂಪತಿ ವಿಚ್ಚೇಧನ ಪಡೆದು ದೂರವಾಯಿತು.

ಇದೇ ವೇಳೆ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಅವರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಈ ಸಮಯದಲ್ಲಿ ದರ್ಶನ್‌ ಜತೆ ಪವಿತ್ರಾಗೆ ಸ್ನೇಹವಾಗಿ ಭಾವನಾತ್ಮಕವಾಗಿ ಬೆಂಬಲ ಸೂಚಿಸಿದ್ದರು.‌ ಅದಲ್ಲದೆ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಕಳೆದ ೧೦ ವರ್ಷದಿಂದ ಆ ಸ್ನೇಹದಲ್ಲೇ ಇದ್ದಾರೆ.

ಸದ್ಯ ಪವಿತ್ರಾ ಗೌಡ ಅವರು ಫ್ಯಾಷನ್‌ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.

ಇದೀಗ ಪವಿತ್ರಾ ಗೌಡ ಅವರಿಗೆ ವ್ಯಕ್ತಿಯೊಬ್ಬ ಅಶ್ಲೀ; ಮೆಸೇಜ್‌ ಕಳುಹಿಸಿದೆಂಬ ಕೋಪದಲ್ಲಿ ದರ್ಶನ್‌ ಗ್ಯಾಂಗ್‌ ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ  ಪವಿತ್ರಾ ಗೌಡ ಅವರು ಎ 1 ಆರೋಪಿಯಾಗಿ, ನಟ ದರ್ಶನ್‌ ಅವರು ಎ 2 ಆರೋಪಿಯಾಗಿ ಒಟ್ಟು 16 ಮಂದಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಹಾನಿಕರ ಹೇಳಿಕೆ: ಯುವ ರಾಜ್​ಕುಮಾರ್ ಪತ್ನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಸಪ್ತಮಿ ಗೌಡ