Webdunia - Bharat's app for daily news and videos

Install App

ಕಿಚ್ಚ ಸುದೀಪ್-ನಿರ್ಮಾಪಕರ ಜಗಳಕ್ಕೆ ಬ್ರೇಕ್ ಹಾಕಲು ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ

Webdunia
ಮಂಗಳವಾರ, 18 ಜುಲೈ 2023 (16:17 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್ ಕುಮಾರ್ ನಡುವೆ ಮೂಡಿಬರುವ ಮನಸ್ತಾಪ ಸರಿಪಡಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದ್ದಾರೆ.

 ಈ ಹಿಂದೊಮ್ಮೆ ನಿರ್ಮಾಪಕ ಎಂ.ಎನ್. ಕುಮಾರ್ ಹಣ ನೀಡಿದ್ದ ವಿಚಾರ ರವಿಚಂದ್ರನ್ ಗೂ ಗೊತ್ತಿದೆ ಎಂದಿದ್ದರು. ಇದೀಗ ರದ್ದಾಂತ ದೊಡ್ಡದಾಗಿ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದರೆ ಕುಮಾರ್ ವಾಣಿಜ್ಯ ಮಂಡಳಿ ಎದುರು ನ್ಯಾಯ ಕೊಡಿಸಲು ಧರಣಿ ಕೂತಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್, ‘ನಾನು ಅವರು ಇವರು ಹೇಳುವುದನ್ನು ಕೇಳಿಕೊಂಡು ಮಾತನಾಡಲ್ಲ. ದಾಖಲೆ ನೋಡಬೇಕು. ಇಬ್ಬರ ಜೊತೆಗೂ ಮಾತನಾಡ್ತೀನಿ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅದನ್ನು ಹಾಗೇ ಬಿಡಲ್ಲ. ಕುಮಾರ್ ನನಗೆ ಫೋನ್ ಮಾಡಿದ್ದರು. ಆದರೆ ಶೂಟಿಂಗ್ ನಲ್ಲಿದ್ದ ಕಾರಣ ಪಿಕ್ ಮಾಡಲಾಗಲಿಲ್ಲ. ಸುದೀಪ್ ಜೊತೆ ಮಾತನಾಡಬೇಕಾ ಎಂದು ಯೋಚನೆ ಮಾಡ್ತೀನಿ. ಸುದೀಪ್ ಗೆ ನೋವಾಗಿದೆ. ಅದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾನೆ. ಇದು ಒಂಥರಾ ಗಂಡ ಹೆಂಡ್ತಿ ಜಗಳ ಬೀದಿಗೆ ಬಂದಿದೆ ಅಷ್ಟೇ’ ಎಂದಿದ್ದಾರೆ. ಹೀಗಾಗಿ ಈಗ ಸುದೀಪ್ ಮತ್ತು ನಿರ್ಮಾಪಕರ ನಡುವಿನ ವೈಮನಸ್ಯವನ್ನು ರವಿಚಂದ್ರನ್ ಬಗೆಹರಿಸುತ್ತಾರಾ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments