Webdunia - Bharat's app for daily news and videos

Install App

ಸೂಪರ್ ಟಾಕ್ ಟೈಮ್ ನಲ್ಲೇ ಔಟ್ ಆಗಿತ್ತಾ ಚಿರು-ಮೇಘನಾ ಗುಟ್ಟು?

Webdunia
ಮಂಗಳವಾರ, 10 ಅಕ್ಟೋಬರ್ 2017 (11:13 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಚಿರು ಸರ್ಜಾ-ಮೇಘನಾ ರಾಜ್ ವಿವಾಹದ ಬಗ್ಗೆ ವದಂತಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅವರಿಬ್ಬರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನಡೆದ ಸಂಭಾಷಣೆಗಳು ಕುತೂಹಲ ಮೂಡಿಸಿವೆ.

 
ಆ ಟಾಕ್ ಶೋ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಮತ್ತು ಚಿರು ಸರ್ಜಾ ಜತೆಯಾಗಿ ಭಾಗವಹಿಸಿದ್ದರು. ನಿರೂಪಕ ಅಕುಲ್ ಬಾಲಾಜಿ ಕಾರ್ಯಕ್ರಮದುದ್ದಕ್ಕೂ ಇವರಿಬ್ಬರ ಕಾಲೆಳೆಯುತ್ತಲೇ ಇದ್ದರು.

ಪರೋಕ್ಷವಾಗಿ ಚಿರು ಸರ್ಜಾ, ಮೇಘನಾಗೆ ಅವರಿಬ್ಬರ ನಡುವೆ ಪ್ರೀತಿ ಇದೆಯಾ ಎಂದು ಕೇಳುತ್ತಲೇ ಇದ್ದರು. ಆದರೆ ಕೊನೆಯವರೆಗೂ ಇಬ್ಬರೂ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರಲೇ ಇಲ್ಲ. ಆದರೆ ಒಂದು ಹಂತದಲ್ಲಿ ಚಿರು ಸರ್ಜಾ ತಾನು 8 ವರ್ಷದಿಂದ ಸಿಂಗಲ್ ಅಲ್ಲ ಎಂದರು. ಆದರೆ ಅದು ಸಿನಿಮಾ ಬಗ್ಗೆ ಹೇಳಿದ್ದು ಎಂದು ಮಾತು ಹಾರಿಸಿದರು.

ಇನ್ನೊಮ್ಮೆ ಮೇಘನಾ ಬಳಿ ಪಕ್ಷಿ ಸಾಕುವುದು ನಿಮಗೆ ಇಷ್ಟವೇ? ಇಲ್ಲಾ ಪಕ್ಷಿ ಸಾಕುವವರನ್ನು ಇಷ್ಟಪಡುತ್ತೀರಾ? ಎಂದು ಅಕುಲ್ ಕಾಲೆಳೆದರು. ಅಸಲಿಗೆ ಚಿರು ಸರ್ಜಾ ಪಕ್ಷಿ ಸಾಕುತ್ತಿದ್ದಾರೆ. ವಿಶೇಷವೆಂದರೆ ಈ ಪ್ರಶ್ನೆಗೆ ಉತ್ತರಿಸಿದ ಮೇಘನಾ ಪಕ್ಷಿ ಸಾಕುವವರನ್ನು ಇಷ್ಟ ಎಂದಿದ್ದರು! ಇದುವರೆಗೂ ಇಬ್ಬರೂ ಮದುವೆ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments