Webdunia - Bharat's app for daily news and videos

Install App

ಮಧ್ಯರಾತ್ರಿ ಜಗ್ಗೇಶ್ ಗೆ ಕರೆ ಮಾಡಿದ್ದ ಚಿರಂಜೀವಿ ಸರ್ಜಾ

Webdunia
ಸೋಮವಾರ, 8 ಜೂನ್ 2020 (08:47 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ಲವ್ ಮ್ಯಾರೇಜ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತು. ಇವರಿಬ್ಬರ ಮದುವೆಗೂ ಮನೆಯಲ್ಲಿ ಆರಂಭದಲ್ಲಿ ಮೇಘನಾ ಮನೆಯಲ್ಲಿ ಸಣ್ಣ ಮಟ್ಟಿನ ವಿರೋಧವಿತ್ತಂತೆ. ಈ ಬಗ್ಗೆ ನವರಸನಾಯಕ ಜಗ್ಗೇಶ್ ಹೇಳಿಕೊಂಡಿದ್ದಾರೆ.

ಒಂದು ದಿನ ಮಧ್ಯರಾತ್ರಿ 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ಮಾಮ ನಾನು ಚಿರು ಅಂದ. ವಿಷಯ ನಾನು ಮೇಘನ ಮದುವೆ ಆಗಬೇಕು. ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ-ಅಮ್ಮನ ಜತೆ ಮಾತನಾಡಬೇಕು ಅಂದ. ನಾನು ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತನಾಡಿ ನನ್ನ ಸ್ನೇಹಿತ ಜ್ಯೋತಿಷಿಗಳ ಬಳಿ ಇಬ್ಬರ ಜಾತಕ ನೋಡಿಸಿದೆ. ಅಷ್ಟಮದಲ್ಲಿ ಕುಜದೋಷವಿದೆ. ಪೂಜೆ ಮಾಡಿದರೆ ಸರಿ ಹೋಗುತ್ತದೆ ಎಂದರು. ಆ ಪೂಜೆ ಮಾಡಿಸಿದರೋ ಇಲ್ಲವೋ ಗೊತ್ತಿಲ್ಲ.


ಅವರ ಮನೆಯ ಎದುರೇ ನನಗೆ ಶೂಟಿಂಗ್ ಇತ್ತು. ಶೂಟಿಂಗ್ ಮುಗಿಸಿ ಮೇಘನಾ ಮನೆಗೆ ಹೋಗಿ ಕಾಫಿ ಕುಡಿದು ಸುಂದರ್ ಜತೆ ಮಾತನಾಡಿ ಮದುವೆ ಫಿಕ್ಸ್ ಮಾಡಿಸಿ ಬಂದೆವು. ದೇವರ ದಯೆಯಿಂದ ಮದುವೆ ಮುಗಿಯಿತು. ಆ ಬಳಿಕವೂ ಅನೇಕ ಬಾರಿ ಕರೆ ಮಾಡಿ ಮಾಮ ಮನೆಗೆ ಬಂದು ಅಜ್ಜಿಯ ಕೈ ರುಚಿ ಊಟ ಮಾಡಿ ಎನ್ನುತ್ತಿದ್ದ. ಆದರೆ ನಾನು ಹೂಂ ಅಂತಿದ್ದೆನೇ ಹೊರತು ಹೋಗಿರಲಿಲ್ಲ. ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದು ನೋಡಿದರೆ ಇಂತಹಾ ಸುದ್ದಿ. ಹೇಗೆ ಅರಗಿಸಿಕೊಳ್ಳಲಿ ಎಂದು ಜಗ್ಗೇಶ್ ಬೇಸರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments