Webdunia - Bharat's app for daily news and videos

Install App

Darshan Thoogudeepa: ದರ್ಶನ್, ಪವಿತ್ರಾ ಗೌಡಗೆ ಇಂದು ಬಿಗ್ ಡೇ

Krishnaveni K
ಶುಕ್ರವಾರ, 29 ನವೆಂಬರ್ 2024 (11:08 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿಗಾಗಿ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಇಂದು ಬಿಗ್ ಡೇ ಎಂದೇ ಹೇಳಬಹುದು.

ದರ್ಶನ್ ಪರ ವಕೀಲ ಸಿವಿ ನಾಗೇಶ್ ಮೂರು ದಿನಗಳ ಕಾಲ ನಿರಂತರವಾಗಿ ದರ್ಶನ್ ಗೆ ಯಾಕೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ದರ್ಶನ್ ಪ್ರಕರಣದಲ್ಲಿ ಪೊಲೀಸರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ವಾದ ಮಂಡಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪೊಲೀಸರ ಲೋಪಗಳನ್ನು ಎತ್ತಿ ಹಿಡಿದಿದ್ದಾರೆ.
  
ಇದೀಗ ಪ್ರಾಸಿಕ್ಯೂಷನ್ ಪ್ರಸನ್ನಕುಮಾರ್ ವಾದ ಮಂಡನೆ ನಡೆಯಬೇಕಿದೆ. ಇಂದಿನಿಂದ ಪ್ರಸನ್ನಕುಮಾರ್ ತಮ್ಮ ಪ್ರತಿ ವಾದ ನಡೆಸುವ ಸಾಧ್ಯತೆಯಿದೆ. ದರ್ಶನ್ ಗೆ ಯಾಕೆ ಜಾಮೀನು ನೀಡಬಾರದು ಮತ್ತು ಸಿವಿ ನಾಗೇಶ್ ಉಲ್ಲೇಖಿಸಿರುವ ಲೋಪಗಳಿಗೆ ಪ್ರಸನ್ನಕುಮಾರ್ ಇಂದು ಪ್ರತಿವಾದ ನಡೆಸುವ ಸಾಧ್ಯತೆಯಿದೆ.

ಒಂದು ವೇಳೆ ಪ್ರಸನ್ನಕುಮಾರ್ ಜಾಮೀನು ನೀಡುವುದಕ್ಕೆ ಅಡ್ಡಿಪಡಿಸದೇ ಇದ್ದರೆ ದರ್ಶನ್ ಗೆ ಸುಲಭವಾಗಿ ಜಾಮೀನು ಸಿಗಲಿದೆ. ಕೇವಲ ದರ್ಶನ್ ಮಾತ್ರವಲ್ಲ, ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಅನುಕುಮಾರ್ ಸೇರಿದಂತೆ ಆರು ಮಂದಿಯ ಜಾಮೀನು ಬಗ್ಗೆಯೂ ಇಂದು ತೀರ್ಮಾನವಾಗು ಸಾಧ್ಯತೆಯಿದೆ. ಹೀಗಾಗಿ ದರ್ಶನ್ ಮತ್ತು ಪವಿತ್ರಾ ಗೌಡ ಪಾಲಿಗೆ ಇಂದು ಬಿಗ್ ಡೇ ಆಗಿರಲಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಾರ್ಕಿಂಗ್ ವಿಷಯಕ್ಕೆ ಕಿರಿಕ್, ಪ್ರಾಣ ಕಳೆದುಕೊಂಡ ಖ್ಯಾತ ನಟಿ ಹುಮಾ ಖುರೇಷಿ ಸಹೋದರ

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಮುಂದಿನ ಸುದ್ದಿ
Show comments