Webdunia - Bharat's app for daily news and videos

Install App

ರೇಣುಕಾಸ್ವಾಮಿಯಂತಹ ಗಂಡ ಇದ್ದೂ ಏನು ಪ್ರಯೋಜನ ಎಂದ ಬಿಗ್ ಬಾಸ್ ತನಿಷಾ ಕುಪ್ಪಂಡ

Sampriya
ಗುರುವಾರ, 4 ಜುಲೈ 2024 (17:13 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ, ಬೆಂಕಿ ಎಂದೇ ಕರೆಸಿಕೊಳ್ಳಯವ ತನಿಷಾ ಕುಪ್ಪಂಡ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದಾರೆ ಎಂದು ಎನಿಸಿಕೊಂಡಾಗ ನೋವಾಗುತ್ತದೆ. ನನಗೆ ಸಾಕಷ್ಟು ವಿಚಾರಗಳಿಗೆ ದರ್ಶನ್ ಅವರು ಸ್ಫೂರ್ತಿಯಾಗಿದ್ದಾರೆ. ಸುತ್ತಮುತ್ತ ಸಾವಿರಾರು ಕೆಟ್ಟ ಘಟನೆಗಳು ನಡೆಯುತ್ತಿದ್ದಾಗ ಅದರಲ್ಲಿ ಒಳ್ಳೆಯದನ್ನು ನಾವು ಆಯ್ದುಕೊಳ್ಳಬೇಕು. ಹಾಗೇ ದರ್ಶನ್ ವಿಚಾರದಲ್ಲಿ ನಾನು ಅದನ್ನೇ ಮಾಡುತ್ತೇನೆ ಎಂದರು.

ರೇಣುಕಾಸ್ವಾಮಿ ಪ್ರಕರಣ ಸಂಬಂಧ ಅವರ ಪತ್ನಿ ನನಗೆ ಪ್ರಶ್ನೆ ಮಾಡಿದ್ದರು. ಹುಟ್ಟುವ ಮಗುವಿಗೆ ಅಪ್ಪನ ಬಗ್ಗೆ ಏನ್ ಹೇಳಬೇಕು ಅಂತ. ಈ ರೀತಿಯ ಕೆಟ್ಟ ಗುಣವನ್ನು ಹೊಂದಿರುವ ವ್ಯಕ್ತಿಯ ಮುಖವನ್ನು ಆ ಮಗು ನೋಡೋದೇ ಬೇಡ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತಿದ್ದು, ಎಲ್ಲರಿಗೂ ನ್ಯಾಯ ಸಿಗಲಿ ಎಂದು ಆಶಿಸಿದರು.

ರೇಣುಕಾಸ್ವಾಮಿಯಂತಹ ಕ್ರೂರರು ನಮಗೂ ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಾರೆ. ಈ ಬಗ್ಗೆ ದೂರು ನೀಡಿದರೂ ನಮಗೆ ನ್ಯಾಯ ಸಿಗಲಿಲ್ಲ. ಈ ಬಗ್ಗೆ ನಾವು ಹೇಳಿಕೊಂಡರೆ ನಮ್ಮದೇ ತಪ್ಪು ಎಂಬಂತೆ ಕಮೆಂಟ್ ಮಾಡುತ್ತಾರೆ. ನಾವು ಹಾಕುವ ಬಟ್ಟೆಯಿಂದ ಈ ರೀತಿ ಮೆಸೇಜ್ ಹಾಕುತ್ತಾರೆಂದು ನಮ್ಮನ್ನೇ ಕಾರಣಕರ್ತರಾಗಿ ಮಾಡುತ್ತಾರೆ.

ಆದರೆ ನನಗೆ ಈ ರೀತಿಯ ಅಶ್ಲೀಲ ಮೆಸೇಜ್‌ಗಳು ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುನ್ನಾ ಹೆಚ್ಚಾಗಿ ಬರುತ್ತಿತ್ತು. ಆದರೆ ಇದೀಗ ಆ ರೀತಿಯ ಮೆಸೇಜ್‌ಗಳು ತುಂಬಾ ಕಡಿಮೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

Vaishnavi Gowda: ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದ ಹಾಗೇ ಹಸೆಮಣೆ ಏರಲು ಸಜ್ಜಾದ ವೈಷ್ಣವಿ ಗೌಡ

ಬರ್ತಡೇ ಆಚರಿಸಿದ ಕೆಲ ಕ್ಷಣದಲ್ಲೇ ಕೊಲೆಯಾದ ಪಾಕ್‌ನ ಖ್ಯಾತ ಇನ್ಫೂಲೆನ್ಸರ್ ಸನಾ ಯೂಸುಫ್‌

Actor Anantnag: ಕನ್ನಡದ ಹಿರಿಯ ನಟನಿಗೆ ಪ್ರಧಾನಿ ಮೋದಿ ಎಷ್ಟು ಗೌರವ ಕೊಡ್ತಾರೆ

Kamal Haasan: ಕ್ಷಮೆ ಕೇಳಿ ಎಂದರೆ ಇಷ್ಟುದ್ದ ಪತ್ರ ಬರೆದ ಕಮಲ್ ಹಾಸನ್ ಹೇಳಿದ್ದೇನು

ಮುಂದಿನ ಸುದ್ದಿ
Show comments