Publish Date: Thu, 23 Jul 2020 (09:45 IST)
Updated Date: Thu, 23 Jul 2020 (09:48 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಜಯ ಶ್ರೀ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ನಿನ್ನೆ ‘ಐ ಕ್ವಿಟ್’ ಎಂದು ಬರೆದುಕೊಂಡಿದ್ದು ಕೆಲವು ಕಾಲ ಕೋಲಾಹಲವನ್ನೇ ಸೃಷ್ಟಿಸಿತ್ತು.
ಜಯಶ್ರೀ ಸಂದೇಶ ನೋಡಿ ಅನೇಕರು ಆಕೆ ಅನಾಹುತ ಮಾಡಿಕೊಳ್ಳಲು ಹೊರಟಿರಬಹುದು ಎಂದು ಭಾವಿಸಿ ಸಾಂತ್ವನ ಹೇಳಲು ಆರಂಭಿಸಿದ್ದರು. ಮತ್ತೆ ಕೆಲವರು ಆಕೆಯ ಮೊಬೈಲ್ ಸಂಪರ್ಕಿಸಲು ಪ್ರಯತ್ನಿಸಿ ಸೋತಿದ್ದರು. ಹೀಗಾಗಿ ಕೆಲವು ಕಾಲ ಆತಂಕ ಸೃಷ್ಟಿಯಾಯಿತು.
ಆದರೆ ಇಷ್ಟೆಲ್ಲಾ ರಾದ್ದಾಂತವಾದ ಬಳಿಕ ನಟಿ ‘ಐ ಆಮ್ ಆಲ್ ರೈಟ್..ಸೇಫ್’ ಎಂದು ಎಲ್ಲರೂ ನಿಟ್ಟುಸಿರುವ ಬಿಡುವಂತೆ ಮಾಡಿದ್ದರು. ಕೆಲವು ಸಮಯದ ಹಿಂದೆ ಜಯಶ್ರೀ ಕೂಡಾ ಮಾನಸಿಕ ಖಿನ್ನತೆಗೊಳಗಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅವರು ಮಾಡಿದ ಸಂದೇಶ ಆತಂಕಪಡುವಂತೆ ಮಾಡಿತ್ತು. ಆದರೆ ಅಷ್ಟಕ್ಕೂ ಅವರು ಯಾಕೆ ಈ ರೀತಿಯ ಸಂದೇಶ ಬರೆದುಕೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.