Webdunia - Bharat's app for daily news and videos

Install App

ಬಿಬಿಕೆ11: ಸಸ್ಯಾಹಾರಿ ಧನರಾಜ್ ಗೆ ಚಿಕನ್ ತಿನಿಸಿ ತಮಾಷೆ ಮಾಡಿದ ಸ್ಪರ್ಧಿಗಳು

Krishnaveni K
ಬುಧವಾರ, 25 ಡಿಸೆಂಬರ್ 2024 (10:39 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶುದ್ಧ ಸಸ್ಯಾಹಾರಿಯಾಗಿರುವ ಧನರಾಜ್ ಆಚಾರ್ ಗೆ ಚಿಕನ್ ತಿನಿಸಿ ಮನೆಯವರು ತಮಾಷೆ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಲ್ ಚಲ್ ಸೃಷ್ಟಿಸಿದೆ.

ಟಾಸ್ಕ್ ನಡುವೆ ಸಹ ಸ್ಪರ್ಧಿಗಳು ನೀಡಿದ ಆಹಾರವನ್ನು ಧನರಾಜ್ ಸೇವಿಸುತ್ತಾರೆ. ಆಗ ಭವ್ಯಾ ಅದು ಚಿಕನ್ ಎಂದು ನಗುತ್ತಾ ಹೇಳುತ್ತಾರೆ. ಶಾಕ್ ಆದ ಧನರಾಜ್ ಸಹ ಸ್ಪರ್ಧಿ ರಜತ್ ಗೆ ಕೇಳುತ್ತಾರೆ. ಹೌದು ಎಂದು ರಜತ್ ಹೇಳಿದಾಗ ಸೀದಾ ಕಿಚನ್ ಸಿಂಕ್ ಬಳಿ ಓಡುವ ಧನರಾಜ್ ಬಾಯಿ ತೊಳೆದುಕೊಳ್ಳುತ್ತಾರೆ.

ಆಗ ಉಳಿದ ಸ್ಪರ್ಧಿಗಳು ಜೋರಾಗಿ ನಗುತ್ತಾರೆ. ರಜತ್ ಹೋಗಿ ಗಂಜಲ ಹಾಕಿಕೊಂಡು ಬಾಯಿ ತೊಳ್ಕೋ ಎಂದು ಅಪಹಾಸ್ಯ ಮಾಡುತ್ತಾರೆ. ಇದರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆಹಾರ ಎನ್ನುವುದು ಅವರವರ ಆಯ್ಕೆ. ಈ ವಿಚಾರದಲ್ಲಿ ಯಾಕೆ ಅವರನ್ನು ಉಳಿದ ಸ್ಪರ್ಧಿಗಳು ಅಪಹಾಸ್ಯ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಕೆಲವರು ಬಿಗ್ ಬಾಸ್ ಗೆ ಬಂದ ಮೇಲೆ ಎಲ್ಲವನ್ನೂ ಬಿಡಬೇಕು, ಮಡಿವಂತಿಕೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಏನೇ ಆದರೂ ಚಿಕನ್ ತಿಂದ ಮೇಲೆ ಅಪರಾಧಿ ಪ್ರಜ್ಞೆಯಿಂದ ಧನರಾಜ್ ದೇವರಿಗೆ ಅಡ್ಡಬಿದ್ದು ಕ್ಷಮೆ ಯಾಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

Road Accident: ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ನಟ ಶೈನ್ ಟಾಮ್ ಚಾಕೊ

Akhil Akkineni Marriage: ಟ್ರೆಂಡಿಂಗ್‌ನಲ್ಲಿದೆ ನಾಗರ್ಜುನ ಮಗನ ಮದುವೆ ಫೋಟೋಗಳು

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

ಮುಂದಿನ ಸುದ್ದಿ
Show comments