Select Your Language

Notifications

webdunia
webdunia
webdunia
webdunia

ವೇದಿಕೆಯಲ್ಲಿ ನಟಿ ಅಂಜಲಿಯನ್ನು ತಳ್ಳಿದ ಬಾಲಯ್ಯ: ನಟನಿಗೆ ಈ ನಡವಳಿಕೆ ಶ್ರೇಯಸ್ಸಲ್ಲ ಎಂದ ನೆಟ್ಟಿಗರು

Balakrishna

sampriya

ಆಂಧ್ರಪ್ರದೇಶ , ಗುರುವಾರ, 30 ಮೇ 2024 (15:35 IST)
Photo By X
ಆಂಧ್ರಪ್ರದೇಶ: ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮುಂಗೋಪದಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ಅವರು ವೇದಿಕೆ ಮೇಲೆ ಸಹ ನಟರ ಮೇಲೆ, ಫ್ಯಾನ್ಸ್ ಮೇಲೆ ರೇಗಾಡಿದ ಸಾಕಷ್ಟು ಉದಾಹರಣೆಗಳಿವೆ.

ಇದೀಗ ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ಬಾಲಯ್ಯ ಅವರು ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ವಿಶ್ವಕ್ ಸೇನ್ ಅಭಿನಯದ ಕೃಷ್ಣ ಚೈತನ್ಯ ನಿರ್ದೇಶನದ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ಅಂಜಲಿ ಮತ್ತು ನೇಹಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ.  ಮೇ 28 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ವಿಶೇಷ ಅತಿಥಿಯಾಗಿ ನಟ ನಂದಮೂರಿ ಬಾಲಕೃಷ್ಣ ಭಾಗವಹಿಸಿದ್ದರು.

ವೇದಿಕೆಯಲ್ಲಿ ನೇಹಾ ಶೆಟ್ಟಿ ಮೊದಲಾದವರು ನಿಂತಿರುವಾಗಿ ಬಾಲಯ್ಯ ಅವರು ಅಂಜಲಿಗೆ  ಏನೋ ಹೇಳಲು ಮುಂದಾಗಿದ್ದಾರೆ. ಆದರೆ ಅದು ಅಂಜಲಿಗೆ ಕೇಳಿಲ್ಲವೆಂದು ಬಾಲಯ್ಯ ಸಿಟ್ಟಾಗಿ, ಅವರನ್ನು ತಳ್ಳಿದ್ದಾರೆ. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ವಿಡಿಯೋ ವೈರಲ್‌ ಆಗುತ್ತಿರುವ ಬೆನ್ನಲ್ಲೇ ನೆಟ್ಟಿಗರು ಬಾಲಯ್ಯ ನಡವಳಿಕೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಿರಿಯ ನಟ ಬಾಲಯ್ಯ ಅವರ ಈ ರೀತಿಯ ನಡವಳಿಕೆ ಸರಿಯಲ್ಲ. ಇನ್ನೂ ಕೆಲವರು ಇದೇನು ಬಾಲಯ್ಯ ಅವರ ಹೊಸ ನಡವಳಿಕೆಯೇನಲ್ಲ ಎಂದು ಟೀಕಿಸಿದ್ದಾರೆ.

ಇನ್ನೂ ಅಂಜಲಿ ಅವರು ಬಾಲಯ್ಯ ಅವರ ನಡವಳಿಕೆಯನ್ನು ಲಘುವಾಗಿ ತೆಗೆದುಕೊಂಡು ನಕ್ಕಿದ್ದಾರೆ. ಆದರೆ ಇದು ಬಾಲಯ್ಯ ಅವರಿಗೆ ಶ್ರೇಯಸ್ಸಲ್ಲ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ