Webdunia - Bharat's app for daily news and videos

Install App

ಆಟಕ್ಕುಂಟು ಲೆಕ್ಕಕ್ಕಿಲ್ಲ: ಅನಾವರಣಗೊಂಡಿರೋದು ಅದ್ಭುತ ಟ್ರೇಲರ್!

Webdunia
ಶನಿವಾರ, 7 ಸೆಪ್ಟಂಬರ್ 2019 (16:56 IST)
ರಾಮ್ ಜೆ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಕ್ರಿಯೇಟಿವಿಟಿಗಳ ಗಾಳಿ ಬಲವಾಗಿ ಬೀಸಲಾರಂಭಿಸಿದೆಯಲ್ಲಾ? ಆ ಅಲೆಯಲ್ಲಿಯೇ ಸಾಗಿಬಂದಂತೆ ಭಾಸವಾಗುತ್ತಿರೋ ಈ ಚಿತ್ರದ ಪ್ರಾಮಿಸಿಂಗ್ ಟ್ರೇಲರ್ ಇದೀಗ ಲಾಂಚ್ ಆಗಿದೆ. ಈ ಮೂಲಕ ಇದುವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಬಗ್ಗೆ ಮೂಡಿಕೊಂಡಿದ್ದ ಭರವಸೆ ಮತ್ತಷ್ಟು ತೀವ್ರವಾಗಿದೆ.
ನಿರ್ದೇಶಕರ ಪಾಲಿಗೆ ಇದು ಮೊದಲ ಅನುಭವ. ಅವರು ಸಾಕಷ್ಟು ವರ್ಷಗಲ ಕಾಲ ಕನಸು ಕಂಡು, ಥರ ಥರದಲ್ಲಿ ಅಧ್ಯಯನ ಮಾಡಿ, ವರ್ಷಾಂತರಗಳ ಕಾಲ ಫೀಲ್ಡ್ ವರ್ಕ್ ಮಾಡಿ ಈ ಸಿನಿಮಾದ ಕಥೆ ರೂಪಿಸಿರೋದರ ಬಗ್ಗೆ ಈ ಹಿಂದೆಯೇ ಹೇಳಿಕೊಂಡಿದ್ದರು. ಅಂಥಾ ಶ್ರದ್ಧೆಗಳೆಲ್ಲವೂ ಈ ಟ್ರೇಲರ್ ಮೂಲಕ ಪ್ರತಿಫಲಿಸಿವೆ. ಇದು ನವ ನಿರ್ದೇಶಕರಿಂದ ರೂಪಿಸಲ್ಪಟ್ಟಿರೋ ಸಿನಿಮಾ ಅಂದರೆ ನಂಬಲು ಕಷ್ಟವಾಗುವಷ್ಟು ಅಚ್ಚುಕಟ್ಟಾಗಿ ಇಡೀ ಚಿತ್ರ ಮೂಡಿ ಬಂದಿರೋ ಸುಳಿವೂ ಕೂಡಾ ಈ ಟ್ರೇಲರಿನಲ್ಲಿಯೇ ಸಿಕ್ಕಿದೆ.
 
ಈ ಚಿತ್ರದಲ್ಲಿ ಗೌತಮ್, ಭರತ್ ಸಾಗರ್, ಬೇಬಿ ಪ್ರಾಜ್ಞಾ . ಅಚ್ಯುತ್ ಕುಮಾರ್ ಮೂತಾದವರ ತಾರಾಗಣವಿದೆ. ಪರಮೇಶ್ ಸಿ ಎಂ ಛಾಯಾಗ್ರಹಣ, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ. ಒಟ್ಟಾರೆಯಾಗಿ ಇದು ಮಾಮೂಲಿ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರವಲ್ಲ, ಇದರಲ್ಲಿ ವಿಶೇಷವಾದುದೇನೋ ಇದೆ ಎಂಬ ನಂಬಿಕೆಯನ್ನು ಈ ಟ್ರೇಲರ್ ಬಲಗೊಳಿಸಿದೆ. ಸಂಚಾರಿ ವಿಜಯ್, ಮಯೂರಿ ಮತ್ತು ದುನಿಯಾ ರಶ್ಮಿಯ ಪಾತ್ರಗಳು ಮತ್ತು ಅವುಗಳ ಭಯಾನಕ ಚಹರೆಗಳೇ ಈ ಸಿನಿಮಾಗಾಗಿ ಜನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments