Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ಚಿರುಗೆ ತಾವು ಕಟ್ಟಿಸಿದ ದೇವಾಲಯ ತೋರಿಸಿದ ಅರ್ಜುನ್ ಸರ್ಜಾ

ಜ್ಯೂನಿಯರ್ ಚಿರುಗೆ ತಾವು ಕಟ್ಟಿಸಿದ ದೇವಾಲಯ ತೋರಿಸಿದ ಅರ್ಜುನ್ ಸರ್ಜಾ
ಬೆಂಗಳೂರು , ಗುರುವಾರ, 8 ಜುಲೈ 2021 (13:09 IST)
ಬೆಂಗಳೂರು: ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿ ತಮ್ಮ ಕುಟುಂಬದ ವತಿಯಿಂದ ಕಟ್ಟಿಸಿದ ಆಂಜನೇಯನ ದೇವಾಲಯದ ಕುಂಭಾಭಿಷೇಕ ಇತ್ತೀಚೆಗೆ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರೆಲ್ಲರೂ ಭಾಗಿಯಾಗಿದ್ದರು.


ಆದರೆ ಜ್ಯೂನಿಯರ್ ಚಿರು ಸರ್ಜಾ ಮತ್ತು ಮೇಘನಾ ಸರ್ಜಾ ಮಾತ್ರ ಭಾಗಿಯಾಗಿರಲಿಲ್ಲ. ಕೊರೋನಾ ಕಾರಣದಿಂದ ಎಳೆಯ ಮಗುವನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗಿರಲಿಲ್ಲ.

ಆದರೆ ಅರ್ಜುನ್ ಸರ್ಜಾಗೆ ತಮ್ಮ ಮೊಮ್ಮಗನಿಗೆ ಹೇಗಾದರೂ ದೇವಾಲಯ ತೋರಿಸಲೇಬೇಕೆಂದು ಅನಿಸಿತ್ತು. ಇದಕ್ಕಾಗಿ ವಿಡಿಯೋ ಕಾಲ್ ಮುಖಾಂತರವೇ ಆಂಜನೇಯನ ದರ್ಶನ ಮಾಡಿಸಿ ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ರಾಣಿಗೆ ಈ ಹೊಸ ಲುಕ್ ಅರ್ಪಿಸಿದ ಕನ್ನಡತಿ ರಂಜಿನಿ ರಾಘವನ್