Select Your Language

Notifications

webdunia
webdunia
webdunia
webdunia

ಅದ್ಧೂರಿಯಾಗಿ ನಡೆದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಎಂಗೇಜ್ ಮೆಂಟ್

ಅದ್ಧೂರಿಯಾಗಿ ನಡೆದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಎಂಗೇಜ್ ಮೆಂಟ್
ಚೆನ್ನೈ , ಶನಿವಾರ, 28 ಅಕ್ಟೋಬರ್ 2023 (08:30 IST)
ಚೆನ್ನೈ: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಖ್ಯಾತ ತಮಿಳು ನಟ ತಂಬಿ ರಾಮಯ್ಯ ಪುತ್ರ, ನಟ ಉಮಾಪತಿ ಅವರ ಜೊತೆ ಐಶ್ವರ್ಯಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಚೆನ್ನೈನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ.

ಅರ್ಜುನ್ ಸರ್ಜಾ ಕುಟುಂಬ, ಧ್ರುವ ಸರ್ಜಾ ಮತ್ತಿತರರು ಪಾಲ್ಗೊಂಡಿದ್ದಾರೆ. ಉಮಾಪತಿ ಮತ್ತು ಐಶ್ವರ್ಯಾ ರಿಯಾಲಿಟಿ ಶೋ ಒಂದರಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದೀಗ ಕುಟುಂಬಸ್ಥರ ಸಮ್ಮತಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ಮದುವೆ ಸದ್ಯದಲ್ಲಿಯೇ ಚೆನ್ನೈನಲ್ಲಿ ನಡೆಯಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಿಂದ ಬಿಡುಗಡೆಯಾದ ವರ್ತೂರು ಸಂತೋಷ್