Select Your Language

Notifications

webdunia
webdunia
webdunia
webdunia

ಮಾರ್ಟಿನ್ ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಎಪಿ ಅರ್ಜುನ್

AP Arjun

Krishnaveni K

ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2024 (13:33 IST)
ಬೆಂಗಳೂರು: ಸ್ಯಾಂಡಲ್ ವುಡ್ ಈಗ ಮತ್ತೊಮ್ಮೆ ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದೆ. ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿಯಿರುವಾಗಗ ನಿರ್ದೇಶಕ ಎಪಿ ಅರ್ಜುನ್ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾರ್ಟಿನ್ ಸಿನಿಮಾವನ್ನು ಎಪಿ ಅರ್ಜುನ್ ಅವರೇ ನಿರ್ದೇಶಿಸಿದ್ದರು. ಪೋಸ್ಟರ್ ಗಳಲ್ಲಿಯೂ ನಿರ್ದೇಶಕ ಎಂದು ಅವರ ಹೆಸರೇ ಇದೆ. ಆದರೆ ಇತ್ತೀಚೆಗೆ ನಿರ್ಮಾಪಕ ಉದಯ್ ಮೆಹ್ತಾ ಮತ್ತು ನಿರ್ದೇಶಕ ಎಪಿ ಅರ್ಜುನ್ ನಡುವೆ ಹಣಕಾಸಿನ ವಿಚಾರಕ್ಕೆ ಮನಸ್ತಾಪವಾಗಿದೆ. ಆದರೆ ಉದಯ್ ಕೆ ಮೆಹ್ತಾ ನಿರ್ದೇಶಕರನ್ನು ದೂರವಿಟ್ಟು ಸಿನಿಮಾ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದ್ದರು.

ಇದು ನಿರ್ದೇಶಕ ಎಪಿ ಅರ್ಜುನ್ ಕೆಂಗಣ್ಣಿಗೆ ಗುರಿಯಾಗಿದೆ. ನನ್ನನ್ನು ಗಣನೆಗೆ ತೆಗೆದುಕೊಳ್ಳದೇ ಸಿನಿಮಾ ಬಿಡುಗಡೆ ಮಾಡಲು ಬಿಡಲ್ಲ ಎಂದಿದ್ದರು. ಅದರಂತೆ ಈಗ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮದೇ ಸಿನಿಮಾ ಬಿಡುಗಡೆ ತಡೆಗೆ ನಿರ್ದೇಶಕರೊಬ್ಬರು ಕೋರ್ಟ್ ಮೆಟ್ಟಿಲೇರಿರುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಚೊಚ್ಚಲ ಮಗುವಿಗೆ ಜನ್ಮನೀಡಿದ ಹರ್ಷಿಕಾ ಪೂಣಚ್ಚ, ಏನು ಮಗು ಇಲ್ಲಿದೆ ಡೀಟೈಲ್ಸ್