Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹುಟ್ಟುಹಬ್ಬ ದಿನ ಸಿಹಿ ಸುದ್ದಿ ಕೊಡುವುದಾಗಿ ಘೋಷಿಸಿದ ಅನೂಪ್ ಭಂಡಾರಿ

Kiccha Sudeep-Anup Bhandari

Krishnaveni K

ಬೆಂಗಳೂರು , ಗುರುವಾರ, 29 ಆಗಸ್ಟ್ 2024 (11:52 IST)
ಬೆಂಗಳೂರು: ಕಿಚ್ಚ ಸುದೀಪ್ ಹುಟ್ಟುಹಬ್ಬ ದಿನ ಸಿಹಿ ಸುದ್ದಿ ಕೊಡುವುದಾಗಿ ನಿರ್ದೇಶಕ ಅನೂಪ್ ಭಂಡಾರಿ ಇಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್ ಬಿಲ್ಲ ರಂಗ ಭಾಷಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ.

ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಇಂದು 10 ಗಂಟೆಗೆ ಬಿಲ್ಲ ರಂಗ ಭಾಷ ಬಗ್ಗೆ ಪ್ರಮುಖ ಸುದ್ದಿಯೊಂದು ಕೊಡುವುದಾಗಿ ಅನೂಪ್ ಭಂಡಾರಿ ಘೋಷಿಸಿದ್ದರು. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಹುಟ್ಟಹಬ್ಬವಿದ್ದು ಈ ಹಿನ್ನಲೆಯಲ್ಲಿ ಈ ಸಿನಿಮಾ ಘೋಷಣೆಯಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಅದರಂತೆ ಬಿಲ್ಲ ರಂಗ ಸಿನಿಮಾ ನನ್ನ ಮುಂದಿನ ಪ್ರಾಜೆಕ್ಟ್. ಸೆಪ್ಟೆಂಬರ್ 2 ರಂದು 10 ಗಂಟೆಗೆ ಬಿಲ್ಲ ರಂಗ ಸಿನಿಮಾ ಬಗ್ಗೆ ಘೋಷಣೆ ಮಾಡಲಿರುವುದಾಗಿ ಅನೂಪ್ ಭಂಡಾರಿ ಪ್ರಕಟಣೆ ನೀಡಿದ್ದಾರೆ. ಕಿಚ್ಚ ಸುದೀಪ್ ರನ್ನು ನಿರ್ದೇಶಿಸುವುದು ದೊಡ್ಡ ಗೌರವ.  ಸುದೀಪ್ ಸರ್ ಹುಟ್ಟುಹಬ್ಬದಂದು ಮತ್ತೆ ಸಿಗೋಣ. ಬಿ ರೆಡಿ ಬಾಯ್ಸ್ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

ವಿಕ್ರಾಂತ್ ರೋಣ ಬಳಿಕ ಸುದೀಪ್-ಅನೂಪ್ ಮತ್ತೆ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಈ ನಡುವೆ ಮ್ಯಾಕ್ಸ್ ಸಿನಿಮಾ ಮುಗಿಸಿದ್ದಾರಷ್ಟೇ. ಅದಿನ್ನೂ ಬಿಡುಗಡೆಯಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲಿದ್ದಾರೆ ಕನ್ನಡತಿ ರಂಜನಿ ರಾಘವನ್: ಹುಡುಗನೂ ಸೂಪರ್