Select Your Language

Notifications

webdunia
webdunia
webdunia
webdunia

ರಂಗಿತರಂಗ ಗುಂಗಲ್ಲಿ ಹೋದವರಿಗೆ ನಿರಾಸೆ ಮಾಡಿದರಾ ರಾಜರಥ ಅನೂಪ್ ಭಂಡಾರಿ?!

ರಂಗಿತರಂಗ ಗುಂಗಲ್ಲಿ ಹೋದವರಿಗೆ ನಿರಾಸೆ ಮಾಡಿದರಾ ರಾಜರಥ ಅನೂಪ್ ಭಂಡಾರಿ?!
ಬೆಂಗಳೂರು , ಶನಿವಾರ, 24 ಮಾರ್ಚ್ 2018 (09:29 IST)
ಬೆಂಗಳೂರು: ರಂಗಿತರಂಗ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸದೊಂದು ಭರವಸೆ ಕೊಟ್ಟಿದ್ದ ಅನೂಪ್ ಭಂಡಾರಿ ರಾಜರಥ ಸಿನಿಮಾದಲ್ಲಿ ನಿರಾಸೆ ಮೂಡಿಸಿದರಾ?

ರಾಜರಥ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ನೋಡಿ ಇಂತಹದ್ದೊಂದು ಅನುಮಾನ ಬರುತ್ತಿದೆ. ರಾಜರಥ ಸಿನಿಮಾ ಆರಂಭವಾಗುವುದೇ ಪುನೀತ್ ರಾಜ್ ಕುಮಾರ್ ಕಂಠದಿಂದ. ಹೀಗಾಗಿ ಆರಂಭದಲ್ಲಿ ಪ್ರೇಕ್ಷಕರು ಏನೇನೋ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಪ್ರಾರಂಭಿಸುತ್ತಾರೆ. ಆದರೆ ನಂತರ ಕೊಂಚ ಬೋರ್ ಹೊಡೆಸಿತು ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿಕೊಂಡಿದ್ದಾರೆ.

ರಂಗಿ ತರಂಗ ಸಿನಿಮಾ ಲೆವೆಲ್ ಗೆ ನಿರೀಕ್ಷೆಯಿಟ್ಟುಕೊಂಡು ಹೋದ ಪ್ರೇಕ್ಷಕರಿಗೆ ಅನೂಪ್ ನಿರಾಸೆ ಉಂಟು ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಗಮನ ಸೆಳೆಯುವ ಅಂಶವೆಂದರೆ ಅನೂಪ್ ಭಂಡಾರಿ, ಹಿನ್ನಲೆ ಸಂಗೀತ, ಕ್ಲೈಮಾಕ್ಸ್ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಮೊದಲಾರ್ಧದಲ್ಲಿ ಕಥಾ ಪಾತ್ರಗಳ ವಿವರಣೆಯಲ್ಲೇ ಕಾಲ ಕಳೆದು ಹೋಗುತ್ತದೆ. ಇಂಟರ್ ವೆಲ್ ಟೈಮ್ ಗೆ ನಮ್ಮ ತಾಳ್ಮೆ ಕೆಟ್ಟು ಹೋಗುತ್ತದೆ. ಯಾಕೋ ನಿರೂಪ್ ಭಂಡಾರಿ ನಮಗೆ ನಿರಾಸೆ ಮಾಡಿದದರು ಎಂದು ಇನ್ನೊಬ್ಬ ಪ್ರೇಕ್ಷಕ ಪ್ರಭುವಿನ ಅಭಿಪ್ರಾಯವಾಗಿದೆ. ಹಾಗಿದ್ದರೂ ಉತ್ತಮ ಸಂಗೀತ, ಅನೂಪ್ ಡ್ಯಾನ್ಸ್ ನೋಡುವಂತಿದೆ ಎಂದಿದ್ದಾರೆ ಇನ್ನು ಕೆಲವರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಜೆಕೆ ನಡೆದ ಹಾದಿಯಲ್ಲೇ ಬಿಗ್ ಬಾಸ್ ಗೆಳತಿ ಶ್ರುತಿ ಪ್ರಕಾಶ್ ನಡೆಯುತ್ತಿದ್ದಾರಾ?!