Select Your Language

Notifications

webdunia
webdunia
webdunia
webdunia

ಕ್ಷಮೆ ಯಾಚಿಸಿದ ವಿಜಯ ರಂಗರಾಜು ಬಗ್ಗೆ ವಿಷ್ಣುವರ್ಧನ್ ಕುಟುಂಬದ ಪ್ರತಿಕ್ರಿಯೆ

ಕ್ಷಮೆ ಯಾಚಿಸಿದ ವಿಜಯ ರಂಗರಾಜು ಬಗ್ಗೆ ವಿಷ್ಣುವರ್ಧನ್ ಕುಟುಂಬದ ಪ್ರತಿಕ್ರಿಯೆ
ಬೆಂಗಳೂರು , ಭಾನುವಾರ, 13 ಡಿಸೆಂಬರ್ 2020 (16:53 IST)
ಬೆಂಗಳೂರು: ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ತೆಲುಗು ನಟ ವಿಜಯ ರಂಗರಾಜು ಕೊನೆಗೂ ತಮ್ಮ ತಪ್ಪೊಪ್ಪಿಕೊಂಡು ಅಂಗಲಾಚಿ ಕ್ಷಮೆ ಯಾಚಿಸಿದ್ದಾರೆ. ಇದರ ಬಗ್ಗೆ ವಿಷ್ಣು ಕುಟುಂಬದ ಪರವಾಗಿ ಅವರ ಅಳಿಯ, ನಟ ಅನಿರುದ್ಧ್ ಹೇಳಿಕೆ ನೀಡಿದ್ದಾರೆ.


‘ವಿಜಯ ರಂಗರಾಜು ಅವರು ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ಈ ಒಂದು ಪ್ರಕರಣದಿಂದಾಗಿ ಹಿರಿಯರ ಬಗ್ಗೆ, ದಿಗ್ಗಜರ ಬಗ್ಗೆ, ನಮ್ಮನ್ನು ಶಾರೀರಿಕವಾಗಿ ಬಿಟ್ಟು ಹೋಗಿರುವಂತಹ ವ್ಯಕ್ತಿಗಳ ಬಗ್ಗೆ ಈ ರೀತಿ ಬೇಜವಾಬ್ಧಾರಿಯುತವಾಗಿ ಮಾತನಾಡಬಾರದು ಎಂದು ಇಂತಹ ಮನಸ್ಥಿತಿ ಇರುವವರಿಗೆ ಪಾಠ ಸಿಕ್ಕಿದೆ. ನಮಗೆ ಈ ವಿಚಾರವಾಗಿ ಹಲವು ತೆಲುಗು ಚಿತ್ರರಂಗದವರೂ ಕರೆ ಮಾಡಿ, ಮೆಸೇಜ್ ಮಾಡಿ ಅವರ ಪರವಾಗಿ ನಾವು ಕ್ಷಮೆ ಕೇಳುತ್ತೇವೆ ಎಂದಿದ್ದರು. ಇದರಲ್ಲಿ ತಮ್ಮ ತಪ್ಪೇನೂ ಇಲ್ಲ. ಯಾಕೆಂದರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಚಿತ್ರರಂಗವೇ ತಪ್ಪು ಎನ್ನಬಾರದು. ಈ ಸಂದರ್ಭದಲ್ಲಿ ನಮ್ಮ ಜತೆಗೆ ನಿಂತ ಚಿತ್ರರಂಗಕ್ಕೆ, ಮಾಧ‍್ಯಮದವರು ಮತ್ತು ಅಪ್ಪಾವ್ರ ಅಭಿಮಾನಿಗಳಿಗೂ ಕುಟುಂಬದ ಪರವಾಗಿ ಧನ್ಯವಾದಗಳು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣುವರ್ಧನ್ ಅವಹೇಳನ: ಕೈಕಾಲು ಹಿಡಿದು ಕ್ಷಮೆಗೆ ಅಂಗಲಾಚಿದ ವಿಜಯ ರಂಗರಾಜು