Select Your Language

Notifications

webdunia
webdunia
webdunia
webdunia

ಪ್ರಚಾರಕ್ಕೆ ವಿನೂತನ ಟ್ರಿಕ್ ಬಳಸಿಕೊಂಡು ಶಾಕ್ ಮೇಲೆ ಶಾಕ್ ಕೊಡ್ತಿದೆ Chef ಚಿದಂಬರ ಟೀಂ

Aniruddh Jathkar

Krishnaveni K

ಬೆಂಗಳೂರು , ಶನಿವಾರ, 8 ಜೂನ್ 2024 (20:32 IST)
ಬೆಂಗಳೂರು: ಇದೇ ಜೂನ್ 14 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿರುವ ಅನಿರುದ್ಧ್ ಜತ್ಕಾರ್ ನಾಯಕರಾಗಿರುವ Chef ಚಿದಂಬರ ಸಿನಿಮಾ ತಂಡ ಪ್ರಚಾರಕ್ಕೆ ನೂತನ ಟ್ರಿಕ್ ಬಳಸಿಕೊಂಡಿದೆ.

ಎಂ ಆನಂದ್ ರಾಜ್ ನಿರ್ದೇಶನದ Chef ಚಿದಂಬರ ಸಿನಿಮಾ ಕತೆಯೇ ವಿಶಿಷ್ಟವಾಗಿದೆ. ಕಾಮಿಡಿ ಜೊತೆಗೆ ಥ್ರಿಲ್ಲರ್ ಕತೆ ಹೊಂದಿರುವ ಸಿನಿಮಾದಲ್ಲಿ ಅನಿರುದ್ಧ್ Chef ಚಿದಂಬರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಮತ್ತು ರಾಚೆಲ್ ಡೇವಿಡ್ ಕೂಡಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ತಂಡ ಈಗ ಪ್ರಚಾರ ತಂತ್ರದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾ ಕತೆಯೇ ಒಂದು ಮಿಸ್ಟರಿ. ಹೀಗಾಗಿ ಮಿಸ್ಟರಿ ಬಾಕ್ಸ್ ಒಂದನ್ನು ಕನ್ನಡ ಚಲನಚಿತ್ರರಂಗದ ಸ್ಟಾರ್ ಕಲಾವಿದರಿಗೆ ಉಡುಗೊರೆಯಾಗಿ ನೀಡುವ ಮೂಲಕ ಪ್ರಚಾರ ಮಾಡುತ್ತಿದೆ. ನಟ ಧ್ರುವ ಸರ್ಜಾ, ರಮೇಶ್ ಅರವಿಂದ್ ಸೇರಿದಂತೆ ಕಲಾವಿದರಿಗೆ ಮಿಸ್ಟರಿ ಬಾಕ್ಸ್ ನ್ನು ನಿರ್ದೇಶಕ ಆನಂದ್ ರಾಜ್ ನೀಡುತ್ತಿದ್ದಾರೆ.

ಇದನ್ನು ಅವರು ಓಪನ್ ಮಾಡುತ್ತಿದ್ದಂತೇ ಏನೋ ಕಂಡು ಶಾಕ್ ಗೆ ಒಳಗಾದಂತೆ ಮುಖಭಾವ ಮಾಡುತ್ತಿದ್ದಾರೆ. ಅದು ಏನೆಂದು ನೋಡಲು ಜೂನ್ 14 ರಂದು ಥಿಯೇಟರ್ ಗೆ ಹೋಗಿ Chef ಚಿದಂಬರ ಸಿನಿಮಾ ನೋಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ Chef ಚಿದಂಬರ  ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಜೊತೆಗೆ ಇತ್ತೀಚೆಗೆ ಎರಡು ಹಾಡನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ಇದೀಗ ಜೂನ್ 14 ರಂದು ಬಹಳ ದಿನಗಳ ನಂತರ ಒಂದು ಒಳ್ಳೆಯ ಎಂಟರ್ ಟೈನರ್ ಕನ್ನಡ ಸಿನಿಮಾ ನೋಡಲು ಸಜ್ಜಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದನ್ ಶೆಟ್ಟಿ, ನಿವೇದಿತಾ ನಡುವೆ ಪತಿ-ಪತ್ನಿ ಸಂಬಂಧವೇ ಇರಲಿಲ್ಲ: ಲಾಯರ್ ನೀಡಿದ ಹೇಳಿಕೆ