Select Your Language

Notifications

webdunia
webdunia
webdunia
webdunia

ಥಿಯೇಟರ್ ನಿಂದ ‘ರಾಮಾರ್ಜುನ’ ಎತ್ತಂಗಡಿ: ಬೇಸರ ಹೊರಹಾಕಿದ ಅನೀಶ್

ಥಿಯೇಟರ್ ನಿಂದ ‘ರಾಮಾರ್ಜುನ’ ಎತ್ತಂಗಡಿ: ಬೇಸರ ಹೊರಹಾಕಿದ ಅನೀಶ್
ಬೆಂಗಳೂರು , ಶುಕ್ರವಾರ, 5 ಫೆಬ್ರವರಿ 2021 (10:27 IST)
ಬೆಂಗಳೂರು: ಹೊಸಬರ ಸಿನಿಮಾಗಳು ಥಿಯೇಟರ್ ನಲ್ಲಿ ಹೆಚ್ಚು ಕಾಲ ಬಾಳಿಕೆ ಬರಲ್ಲ. ಅದನ್ನು ಎರಡನೇ ವಾರಕ್ಕೇ ಎತ್ತಂಗಡಿ ಮಾಡಲಾಗುತ್ತದೆ. ಈ ರೀತಿ ಹಲವು ಬಾರಿ ಹೊಸ ತಂಡಕ್ಕೆ ಅನುಭವ ಅಗಿದ್ದುಂಟು. ಈಗ ರಾಮಾರ್ಜುನ ಸಿನಿಮಾ ತಂಡವೂ ಅಂತಹದ್ದೇ ಸಂಕಷ್ಟ ಎದುರಿಸುತ್ತಿದೆ.


ಅನೀಶ್ ನಿರ್ದೇಶಿಸಿ, ನಟಿಸಿರುವ ರಾಮಾರ್ಜುನ ಸಿನಿಮಾ ಕಳೆದ ವಾರ ತೆರೆಕಂಡಿತ್ತು. ಹೊಸಬರ ಸಿನಿಮಾವಾದರೂ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಆದರೆ ಈಗ ಎರಡನೇ ವಾರಕ್ಕೇ ಹಲವು ಚಿತ್ರಮಂದಿರಗಳಿಂದ ಸಿನಿಮಾ ತೆಗೆದುಹಾಕಲಾಗಿದೆ. ಇದು ಅನೀಶ್ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೇಸರ ಹೊರಹಾಕಿದ್ದಾರೆ. ‘ನನ್ನ ಸಿನಿಮಾಗೆ ಇದೇ ಮೊದಲ ಬಾರಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ನಾನೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎಂದು ಖುಷಿಯಲ್ಲಿದ್ದೆ. ಆದರೆ ಈಗ ಎರಡನೇ ವಾರದ ಲಿಸ್ಟ್ ನೋಡುತ್ತಿದ್ದರೆ ಹಲವು ಚಿತ್ರಮಂದಿರಗಳಿಂದ ಸಿನಿಮಾ ಕಿತ್ತು ಹಾಕಲಾಗಿದೆ. ದಯವಿಟ್ಟು ನಮ್ಮಂತಹ ಹೊಸಬರ ಸಿನಿಮಾವನ್ನು ಪ್ರೋತ್ಸಾಹಿಸಿ. ಮುಂದಿನ ವಾರ ನೋಡೋಣ ಎಂದು ಕಾದರೆ ಆ ಸಿನಿಮಾ ಅಲ್ಲಿರುತ್ತೋ ಇಲ್ವೋ ಎನ್ನುವ ಗ್ಯಾರಂಟಿ ಇಲ್ಲ. ಇಂದೇ ಹೋಗಿ ನೋಡಿ ನಮ್ಮ ಸಿನಿಮಾವನ್ನು ಗೆಲ್ಲಿಸಿ’ ಎಂದು ಅನೀಶ್ ಬೇಸರದಿಂದಲೇ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಜೊತೆಗೆ ನಿಂತ ಚಿತ್ರರಂಗಕ್ಕೆ ಥ್ಯಾಂಕ್ಸ್ ಹೇಳಿದ ಧ್ರುವ ಸರ್ಜಾ