Select Your Language

Notifications

webdunia
webdunia
webdunia
webdunia

ಬಾಣಂತನ ಮುಗಿಯುವ ಮೊದಲೇ ಶೋಗೆ ಯಾಕೆ ಬಂದ್ರಿ ಎಂದು ಅದಿತಿ ಪ್ರಭುದೇವಗೆ ಪ್ರಶ್ನೆ

Adithi Prabhudeva

Krishnaveni K

ಬೆಂಗಳೂರು , ಶನಿವಾರ, 8 ಜೂನ್ 2024 (13:11 IST)
ಬೆಂಗಳೂರು: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಈಗ ಮುದ್ದಾದ ಮಗುವನ್ನು ಮನೆಯಲ್ಲಿ ಬಿಟ್ಟು ಟಿವಿ ಶೋ ಒಂದಕ್ಕೆ ತೀರ್ಪುಗಾರರಾಗಿ ಬರ್ತಿದ್ದಾರೆ. ಇದರ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜ ರಾಣಿ ಸೀಸನ್ 3 ಇಂದಿನಿಂದ ಆರಂಭವಾಗುತ್ತಿದೆ. ಸೃಜನ್ ಲೋಕೇಶ್, ತಾರಾ ಅನುರಾಧ ಜೊತೆಗೆ ಅದಿತಿ ಪ್ರಭುದೇವ ತೀರ್ಪುಗಾರರಾಗಿ ಹೊಸ ಎಂಟ್ರಿ ಕೊಟ್ಟಿದ್ದಾರೆ. ಇಂದು ಈ ಶೋನ ಗ್ರ್ಯಾಂಡ್ ಓಪನಿಂದ ಇದ್ದು ಈಗಾಗಲೇ ಪ್ರೋಮೋಗಳು ವೈರಲ್ ಆಗಿವೆ.

ಆದರೆ ಪ್ರೋಮೋ ನೋಡಿದ ಮಂದಿ ಅದಿತಿಗೆ ಬುದ್ಧಿಮಾತು ಹೇಳಿದ್ದಾರೆ. ಅಷ್ಟು ಚಿಕ್ಕಮಗುವನ್ನು ಬಿಟ್ಟು ಹೇಗೆ ಶೋಗೆ ಬರ್ತೀರಿ ಎಂದು ಕೆಲವರು ಕೇಳಿದರೆ ಮತ್ತೆ ಕೆಲವರು ಮಗುವಿಗೆ ನಾಲ್ಕು ತಿಂಗಳು ತುಂಬುವವರೆಗಾದರೂ ನೀವು ಮನೆಯಲ್ಲಿಯೇ ರೆಸ್ಟ್ ಮಾಡಬೇಕಿತ್ತು. ಇಲ್ಲದೇ ಹೊದರೆ ಬೆನ್ನು ನೋವು ಬರುತ್ತದೆ ಎಂದು  ಇನ್ನು ಕೆಲವರು ಬುದ್ಧಿ ಮಾತು ಹೇಳಿದ್ದಾರೆ.

ಇದರ ನಡುವೆ ಕೆಲವರಿಗೆ ಅದಿತಿ ದೇಹ ತೂಕದ ಬಗ್ಗೆಯೂ ಕಣ್ಣು ಬಿದ್ದಿದೆ. ಮೊದಲು ತೆಳ್ಳಗಿದ್ದ ಅದಿತಿ ಈಗ ಮಗುವಾದ ಮೇಲೆ ಕೊಂಚ ದಪ್ಪಗಾಗಿದ್ದಾರೆ. ಅದನ್ನೇ ಇಟ್ಟುಕೊಂಡು ಪಡ್ಡೆ ಹುಡುಗರು, ಮೊದಲು ಹೂ ಥರಾ ಇದ್ರಿ, ಈಗ ಹೂಕೋಸು ಥರಾ ಆಗಿದ್ದೀರಲ್ಲಾ ಮೇಡಂ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾ ಪುಟದಿಂದ ಅನ್ ಫಾಲೋ ಮಾಡಿದ್ರೂ ರೊಮ್ಯಾಂಟಿಕ್ ಫೋಟೋ ಇಟ್ಟುಕೊಂಡ ಚಂದನ್ ಶೆಟ್ಟಿ, ನಿವೇದಿತಾ ಗೌಡ