Select Your Language

Notifications

webdunia
webdunia
webdunia
webdunia

ಕಷ್ಟ ಹೇಳಿಕೊಂಡರೂ ಪುನೀತ್, ಶಿವಣ್ಣ ಇನ್ನೂ ಸಹಾಯ ಮಾಡಿಲ್ಲ: ನಟಿ ವಿಜಯಲಕ್ಷ್ಮಿ ಕಣ್ಣೀರು

ಕಷ್ಟ ಹೇಳಿಕೊಂಡರೂ ಪುನೀತ್, ಶಿವಣ್ಣ ಇನ್ನೂ ಸಹಾಯ ಮಾಡಿಲ್ಲ: ನಟಿ ವಿಜಯಲಕ್ಷ್ಮಿ ಕಣ್ಣೀರು
ಬೆಂಗಳೂರು , ಶುಕ್ರವಾರ, 1 ಮಾರ್ಚ್ 2019 (09:25 IST)
ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿರುವ ನಟಿ ವಿಜಯಲಕ್ಷ್ಮಿ ಈಗಾಗಲೇ ಹಣವಿಲ್ಲದೇ ಒದ್ದಾಡುತ್ತಿರುವ ಬಗ್ಗೆ ಚಿತ್ರರಂಗದ ಸಹಾಯ ಕೋರಿದ್ದರು. ಆದರೆ ಇದುವರೆಗೆ ಕಿಚ್ಚ ಸುದೀಪ್ ಬಿಟ್ಟರೆ ಇನ್ಯಾರೂ ವಿಜಯಲಕ್ಷ್ಮಿ ನೆರವಿಗೆ ಬಂದಿಲ್ಲವಂತೆ.


ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಸೇರಿದಂತೆ ಈಗ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ನಟರು ಯಾರೂ ನನ್ನ ಮಾತನಾಡಿಸುತ್ತಿಲ್ಲ ಎಂದು ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.

ಒಂದು ವೇಳೆ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಡಾ. ರಾಜ್ ಕುಮಾರ್ ಬದುಕಿದ್ದರೆ ನನಗೆ ಈ ಸ್ಥಿತಿ ಬರಲು ಬಿಡುತ್ತಿರಲಿಲ್ಲ. ಸದ್ಯಕ್ಕೆ ನನಗೆ ಮನೆಯಿಲ್ಲ. ಬಾಡಿಗೆ ಮನೆಗೆ ಅಡ್ವಾನ್ಸ್ ಕಟ್ಟಲು ಹಣವಿಲ್ಲ. ಆದರೆ ಚಿತ್ರರಂಗದ ಯಾರೂ ನನ್ನ ಸಹಾಯಕ್ಕೆ ಬರುತ್ತಿಲ್ಲ ಎಂದು ವಿಜಯಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಸಿನಿಮಾಗಳಿಗೆ ನಿಷೇಧ ಹೇರಿದರೂ ನಷ್ಟ ಮಾತ್ರ ಪಾಕಿಸ್ತಾನಕ್ಕೆ! ಹೇಗೆ ಗೊತ್ತಾ?!