Publish Date: Fri, 20 Mar 2026 (16:41 IST)
Updated Date: Fri, 20 Mar 2026 (16:47 IST)
ಬೆಂಗಳೂರು: ಧುರಂದರ್1ನಲ್ಲಿ ಎನರ್ಜಿ ಇತ್ತು, ಜನ ಎಂಜಾಯ್ ಮಾಡುತ್ತಿದ್ದರು. ಆದರೆ ಧುರಂದರ್2 ಯಾಕಮಾಡಬೇಕಿತ್ತು ಎಂಬ ಪ್ರಶ್ನೆ ಹುಟ್ಟುತ್ತದೆ ಎಂದು ಸಿನಿಮಾ ವೀಕ್ಷಿಸಿದ ಖ್ಯಾತ ನಟ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಅವರು ಸಾಮಾಜಿಕ ಜಾಲತಾನ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದು ಅಂತ್ಯವಿಲ್ಲದ ಅಧ್ಯಾಯಗಳನ್ನು ಹೊಂದಿರುವ ತುಂಬಾ ನೀರಸ ವಿಷಯದ ಪಠ್ಯಪುಸ್ತಕವನ್ನು ಓದಿದ ಅನುಭವ ನೀಡುತ್ತದೆ. ಒಂದು ಹಂತಕ್ಕೆ ನಿಮ್ಮ ಮೆದುಳು ಕೈಕೊಟ್ಟು, ಮುಂದೆ ನಡೆಯುತ್ತಿರುವ ಈ ದುರಂತ ನೋಡಿ ನಗೋಕೆ ಶುರುಮಾಡುತ್ತದೆ" ಎಂದಿದ್ದಾರೆ.
ನೀವು ನಿಜವಾಗಿಯೂ ಈ ಸಿನಿಮಾ ನೋಡಲು ಬಯಸಿದರೆ, ದಯವಿಟ್ಟು ಥಿಯೇಟರ್ನಲ್ಲಿ ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಡಿ. ಆನ್ಲೈನ್ನ ಓಟಿಟಿಯಲ್ಲಿ ಸಿನಿಮಾ ನೋಡಿ ಹಣ ಉಳಿಸಿ ಎಂದು ವ್ಯಂಗ್ಯ ಮಾಡಿದ್ದಾರೆ.
ಧುರಂಧರದಲ್ಲಿ (ಭಾಗ 1), ಜನರು ಹೂಂ ಹಾಕುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು, ಕಂಪಿಸುತ್ತಿದ್ದರು. ಶಕ್ತಿ ಇತ್ತು. ನಿಶ್ಚಿತಾರ್ಥ ಇತ್ತು. ಇದರಲ್ಲಿ ಪ್ರೇಕ್ಷಕರಿಗೆ ಯಾವುದೂ ಇರಲಿಲ್ಲ. ಈ ಸಿನಿಮಾದಿಂದ ನಿರಾಶೆಯನ್ನು ಅನುಭವಿಸುತ್ತಿದ್ದಾರಾ ಎಂದು ಥಿಯೇಟರ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂದರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.