Select Your Language

Notifications

webdunia
webdunia
webdunia
webdunia

ವೈದ್ಯರಿಗೆ ಊಟ ಪೂರೈಸಲು ಮುಂದಾದ ನಟ ಶ್ರೀಮುರಳಿ

ವೈದ್ಯರಿಗೆ ಊಟ ಪೂರೈಸಲು ಮುಂದಾದ ನಟ ಶ್ರೀಮುರಳಿ
ಬೆಂಗಳೂರು , ಭಾನುವಾರ, 9 ಮೇ 2021 (10:05 IST)
ಬೆಂಗಳೂರು: ದಿನವಿಡೀ ಪಿಪಿಇ ಕಿಟ್ ಧರಿಸಿಕೊಂಡು ಕೊರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯ ಸಿಬ್ಬಂದಿಗಳ ನಟ ಶ್ರೀಮುರಳಿ ನೆರವು ನೀಡುತ್ತಿದ್ದಾರೆ.


ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗಳಿಗೆ ಉಚಿತವಾಗಿ ಊಟ ವಿತರಿಸಲು ಶ್ರೀಮುರಳಿ ಮುಂದೆ ಬಂದಿದ್ದಾರೆ. ಕೆಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್ಐ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಯ ವೈದ್ಯರು, ದಾದಿಯರು ಸೇರಿದಂತೆ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೆ ತಾವೇ ಊಟ ವಿತರಿಸುತ್ತಿದ್ದಾರೆ.

ತಮ್ಮ ತಂಡದ ಜೊತೆಗೆ ಶ್ರೀಮುರಳಿ ಈ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯಲ್ಲಿ ದಿನವಿಡೀ ತೊಡಗಿಸಿಕೊಳ್ಳುವ ವೈದ್ಯ ಸಿಬ್ಬಂದಿಗಳು ಸ್ವಯಂ ಹಿತವನ್ನೂ ಮರೆತಿದ್ದಾರೆ. ಅಂತಹವರಿಗೆ ಮಾನವೀಯ ನೆಲೆಯಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತ್ರಸ್ತರ ಹಸಿವು ನೀಗಿಸುತ್ತಿರುವ ಕಿರುತೆರೆ ನಟ ಕಿರಣ್ ರಾಜ್ ಮತ್ತು ಬಳಗ