Publish Date: Sun, 02 May 2021 (07:26 IST)
Updated Date: Sun, 02 May 2021 (07:28 IST)
ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಗರಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಖ್ಯಾತ ನಟ ಸಾಯಿ ಧರಂ ತೇಜ್ ಅವರ ಹೆಸರಿನಲ್ಲಿ ಇಂತಹದೊಂದು ಹಗರಣ ನಡೆಸಿದ್ದಾರೆ.
ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯ ಲಾಭವನ್ನು ಪಡೆಯಲು ನಟ ಸಾಯಿ ಧರಂ ತೇಜ ಅವರ ಹೆಸರನ್ನು ಹೇಳಿಕೊಂಡು ಕೊರೊನಾ ವೈರಸ್ ಹಾವಳಿಯಿಂದ ಬಳಲುತ್ತಿದ್ದ ಜನರಿಗೆ ಆರ್ಥಿಕ ಸಹಾಯ ಮಾಡಲು ಹಣವನ್ನು ಕೇಳುತ್ತಿದ್ದಾರೆ.
ಈ ವಿಚಾರ ತಿಳಿದ ನಟ ಸಾಯಿ ಧರಂ ತೇಜ್ ಅವರು ತಮ್ಮ ಹೆಸರಿನಲ್ಲಿ ಹಣ ಕೇಳುವ ಮೋಸಗಾರರ ಪರವಾಗಿ ತಮ್ಮ ಅಭಿಮಾನಿಗಳಿಗೆ ಟ್ವೀಟರ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.