Select Your Language

Notifications

webdunia
webdunia
webdunia
webdunia

ಫೆಬ್ರವರಿ 26ರಂದು ಸುದ್ದಿಗೋಷ್ಠಿ ಕರೆದ ನಟ ರಜನೀಕಾಂತ್

ಫೆಬ್ರವರಿ 26ರಂದು ಸುದ್ದಿಗೋಷ್ಠಿ ಕರೆದ ನಟ ರಜನೀಕಾಂತ್
ಚೆನ್ನೈ , ಗುರುವಾರ, 25 ಫೆಬ್ರವರಿ 2021 (12:32 IST)
ಚೆನ್ನೈ : ಸಿನಿಮಾ ಹಾಗೂ ರಾಜಕೀಯದಿಂದ ದೂರವಿದ್ದು, ಸ್ವಲ್ಪ ದಿನಗಳ ಕಾಲ ಮನೆಯಲ್ಲಿ  ವಿಶ್ರಾಂತಿ ಪಡೆಯುತ್ತಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಅವರು  ಇದೀಗ ಸಡನ್ ಆಗಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಆರೋಗ್ಯ ಸ್ಥಿತಿಯಿಂದ ರಾಜಕೀಯದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿದ್ದರು. ಆದರೆ ಈಗ ಫೆಬ್ರವರಿ 26ರಂದು ಚೆನ್ನೈನ ಸ್ಟಾರ್ ಹೋಟೆಲ್ ನಲ್ಲಿ ರಜನೀಕಾಂತ್ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದು ಹಲವರಲ್ಲಿ ಆಶ್ವರ್ಯವನ್ನುಂಟು ಮಾಡಿದೆ.

ಅಲ್ಲದೇ ಇತ್ತೀಚೆಗೆ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ  ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.  ಹಾಗಾಗಿ ರಜನೀಕಾಂತ್ ಸುದ್ದಿಗೋಷ್ಠಿ ತೀವ್ರ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ನಟ ಹೊಸ ಚಿತ್ರ ಘೋಷಣೆ ಮಾಡುತ್ತಾರೆಯೇ ಎಂದು ಸಿನಿಮಾ ಪ್ರಿಯರು ಕಾತುರಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪೇನಾ ಚಿತ್ರದ ಬಳಿಕ ತಮ್ಮ ಸಂಭಾವನೆ ಹೆಚ್ಚಿಸಿದ ನಟಿ ಕೃತಿ ಶೆಟ್ಟಿ