ಆಸ್ಪತ್ರೆಯಲ್ಲಿರುವ ನಟ ದರ್ಶನ್ ಗೆ ಎದೆ ನಡುಗುವಂತಹಾ ಸುದ್ದಿ

Krishnaveni K
ಶುಕ್ರವಾರ, 22 ನವೆಂಬರ್ 2024 (11:38 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಜಾಮೀನು ಪಡೆದು ಈಗ ಆಸ್ಪತ್ರೆಯಲ್ಲಿದ್ದಾರೆ. ಆದರೆ ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿರುವ ದರ್ಶನ್ ಗೆ ಎದೆ ನಡುಗಿಸುವಂತಹ ಶಾಕ್ ಪೊಲೀಸರು ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸರು ಈಗ ಆರೋಪಿಯೊಬ್ಬರ ಮೊಬೈಲ್ ರಿಟ್ರಿವ್ ಮಾಡಲು ಯಶಸ್ವಿಯಾಗಿದ್ದಾರೆ. ಇದರಲ್ಲಿ ರೇಣುಕಾಸ್ವಾಮಿ ಶವದ ಮುಂದೆಯೇ ದರ್ಶನ್ ನಿಂತಿರುವ ಫೋಟೋಗಳು ಲಭ್ಯವಾಗಿದೆ. ಇದನ್ನು ಪೊಲೀಸರು ಈಗ ನ್ಯಾಯಾಲಯದ ಗಮನಕ್ಕೂ ತಂದಿದ್ದಾರೆ.

ಇದುವರೆಗೆ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರಕರಣದಲ್ಲಿ ರೇಣುಕಾಗೆ ದರ್ಶನ್ ಹೊಡೆದಿದ್ದರಷ್ಟೇ. ಬಳಿಕ ಅಲ್ಲಿಂದ ತೆರಳಿದ್ದರು. ರೇಣುಕಾ ಸಾವಿಗೆ ದರ್ಶನ್ ಕಾರಣವಲ್ಲ. ಅವರು ಆ ಸಂದರ್ಭದಲ್ಲಿ ಸ್ಥಳದಲ್ಲೇ ಇರಲಿಲ್ಲ ಎಂದು ವಾದ ಮಂಡಿಸುತ್ತಿದ್ದರು. ಆದರೆ ಪೊಲೀಸರು ನೀಡಿದ ಈ ಎರಡು ಫೋಟೋಗಳಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಗಲಿದ್ದು, ದರ್ಶನ್ ವಿರುದ್ಧ ಸಾಕ್ಷ್ಯ ಪ್ರಬಲವಾಗಿದೆ.

ರೇಣುಕಾ ಶವದ ಮುಂದೆ ದರ್ಶನ್ ನಿಂತಿದ್ದ ಫೋಟೋವನ್ನು ಇನ್ನೊಬ್ಬ ಆರೋಪಿ ಪವನ್ ಕ್ಲಿಕ್ಕಿಸಿದ್ದ. ಆದರೆ ಆ ಫೋಟೋವನ್ನು ಬಳಿಕ ಡಿಲೀಟ್ ಮಾಡಿದ್ದ. ಇದೀಗ ಸತತ ಪ್ರಯತ್ನದ ನಂತರ ಫೋಟೋ ರಿಟ್ರಿವ್ ಮಾಡಲಾಗಿದ್ದು, ದರ್ಶನ್ ಶವದ ಮುಂದೆ ನಿಂತಿರುವುದು ಖಚಿತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಪುನೀತ್ ರಾಜ್ ಕುಮಾರ್ ನಾಲ್ಕನೇ ಪುಣ್ಯ ತಿಥಿ: ಅಪ್ಪು ನೆನಪಿನಲ್ಲಿ ಅಶ್ವಿನಿ ಪುನೀತ್ ಹೇಳಿದ್ದೇನು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments