Webdunia - Bharat's app for daily news and videos

Install App

ಬಾಸ್‌ ಬಾಸ್ ಎಂದು ಕೂಗಿದ ಫ್ಯಾನ್ಸ್‌ಗೆ ಕಿರು ನಗೆ ಬೀರಿದ ನಟ ದರ್ಶನ್

Sampriya
ಸೋಮವಾರ, 30 ಸೆಪ್ಟಂಬರ್ 2024 (17:24 IST)
ಬಳ್ಳಾರಿ: ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ ಮಾತನಾಡಿಸಲು ಸಂದರ್ಶಕರ ಕೊಠಡಿಗೆ ಬರುತ್ತಿದ್ದ ನಟ ದರ್ಶನ್‌ರನ್ನು ಗೇಟ್‌ನ ಹೊರಗಡೆ ಕಾದು ನಿಂತಿದ್ದ ಫ್ಯಾನ್ಸ್‌ ನೋಡಿ ಖುಷಿ ಪಟ್ಟಿದ್ದಾರೆ.

ದರ್ಶನ್ ಅವರು ಸೆಲ್‌ನಿಂದ ಹೊರಗಡೆ ಬರುತ್ತಿದ್ದ ಹಾಗೇ ಫ್ಯಾನ್ಸ್‌ ಒಬ್ಬರು ದೇವರು ಬಂದರು ಎಂದು ಕೂಗಿದ್ದಾರೆ. ಅದಲ್ಲದೆ ಡಿ ಬಾಸ್‌ಗೆ ಜೈ ಎಂದು ಕೂಗಿದ್ದಾರೆ. ಇದನ್ನು ಕೇಳಿಸುತ್ತಿದ್ದ ಹಾಗೇ ದರ್ಶನ್ ಅವರು ಫ್ಯಾನ್ಸ್‌ನತ್ತ ನೋಡುತ್ತಾ ಕಿರುನಗೆ ಬೀರಿ ಸಂದರ್ಶಕರ ಕೊಠಡಿಯೊಳಗೆ ಹೋಗಿದ್ದಾರೆ. 

ಇನ್ನು ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ನಿರಾಸೆಯಾಗಿದ್ದು, ಇದರ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ್, ಆಪ್ತ ಧನ್ವೀರ್ ಅವರು ಜೈಲಿಗೆ ಭೇಟಿ ನೀಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಪರ ವಕೀಲ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ದರ್ಶನ್‌ ಭೇಟಿಗೆ ಬರುವಾಗ ಪತ್ನಿ ವಿಜಯಲಕ್ಷ್ಮೀ ಅವರು ಬಟ್ಟೆ, ಡ್ರೈ ಪ್ರೂಟ್ಸ್‌, ಬಿಸ್ಕೆಟ್ ಅನ್ನು ತಂದಿದ್ದಾರೆ.  ಭೇಟಿ ಸಂದರ್ಭದಲ್ಲಿ  ದರ್ಶನ್‌ಗೆ ಧೈರ್ಯ ತುಂಬಿದ ವಿಜಯಲಕ್ಷ್ಮಿ ಅವರು ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ಮುಂದೇ ಹಾಜರಾದ ವಿಜಯ್ ದೇವರಕೊಂಡ ಹೀಗಂದ್ರು

ದರ್ಶನ್‌ಗಾಗಿ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಇದ್ದೇ ಇರುತ್ತದೆ: ವಿಜಯ್ ರಾಘವೇಂದ್ರ

ಮುಂದಿನ ಸುದ್ದಿ
Show comments