Select Your Language

Notifications

webdunia
webdunia
webdunia
webdunia

ಸುಮಲತಾ ಅಂಬರೀಶ್ ಚುನಾವಣೆ ಸ್ಪರ್ಧೆಗೆ ನಟ ಚೇತನ್ ಟಾಂಗ್

ಸುಮಲತಾ ಅಂಬರೀಶ್ ಚುನಾವಣೆ ಸ್ಪರ್ಧೆಗೆ ನಟ ಚೇತನ್ ಟಾಂಗ್
ಬೆಂಗಳೂರು , ಬುಧವಾರ, 20 ಮಾರ್ಚ್ 2019 (09:15 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಗೆ ನಟ ಚೇತನ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.


ಮಂಡ್ಯದ ಅಭಿವೃದ್ಧಿಗೆ ಸುಮಲತಾ ಕೊಡುಗೆ ಏನು ಪ್ರಶ್ನಿಸಿರುವ ಚೇತನ್ ಇನ್ನೊಂದು ಟ್ವೀಟ್ ಮೂಲಕ ಚುನಾವಣೆಯಲ್ಲಿ ಸ್ಟಾರ್ ಗಿರಿ ಹೆಸರಿನಲ್ಲಿ ಚುನಾವಣೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬರೆದುಕೊಂಡಿದ್ದಾರೆ.

ರೀಲ್ ಲೈಫ್ ಗೂ ರಿಯಲ್ ಲೈಫ್ ಗೂ ವ್ಯತ್ಯಾಸವಿದೆ. ಮತದಾರರು ಮತ್ತು ಮಾಧ್ಯಮಗಳು ಇವೆರಡರ ನಡುವಿನ ವ್ಯತ್ಯಾಸ ಅರಿಯಬೇಕು. ಸ್ಟಾರ್ ಡಮ್ ಹೆಸರಿನಲ್ಲಿ ಚುನಾವಣೆ ಗೆಲ್ಲುವುದು ಸಮಸ್ಯೆಗಳ ಮೂಲವನ್ನು ನಿರ್ಲಕ್ಷಿಸಿದಂತೆ ಎಂದು ಚೇತನ್ ಬರೆದುಕೊಂಡಿದ್ದಾರೆ. ಈ ಮೂಲಕ ಸುಮಲತಾ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಹೆಸರು ಫೈನಲ್ ಮಾಡಿದ್ರಾ ಯಶ್-ರಾಧಿಕಾ ಪಂಡಿತ್? ರಾಧಿಕಾ ಕೊಟ್ಟ ಕ್ಲೂ ಏನು ಗೊತ್ತಾ?