Select Your Language

Notifications

webdunia
webdunia
webdunia
webdunia

ಮಕ್ಕಳ ವಿರುದ್ಧವೇ ದೂರು ಕೊಟ್ಟ ಸ್ಯಾಂಡಲ್ ವುಡ್ ಹಿರಿಯ ನಟ

ಮಕ್ಕಳ ವಿರುದ್ಧವೇ ದೂರು ಕೊಟ್ಟ ಸ್ಯಾಂಡಲ್ ವುಡ್ ಹಿರಿಯ ನಟ
ಬೆಂಗಳೂರು , ಗುರುವಾರ, 16 ಡಿಸೆಂಬರ್ 2021 (10:43 IST)
ಬೆಂಗಳೂರು: ಮಕ್ಕಳೇ ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ಅಶ್ವತ್ಥ್ ನಾರಾಯಣ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಡಾ.ರಾಜ್ ಸೇರಿದಂತೆ ಅನೇಕ ನಟರೊಂದಿಗೆ ಪೋಷಕ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟನಿಗೆ ಮಗ ಮತ್ತು ಮಗಳೇ ಕಾಟ ಕೊಡುತ್ತಿದ್ದಾರಂತೆ. ಸರಿಯಾಗಿ ಊಟ ತಿಂಡಿಯೂ ಕೊಡುತ್ತಿಲ್ಲ. ಪಕ್ಕದ ಮನೆಯವರ ಸಹಾಯ ಕೇಳಿದರೆ ಅವರ ಜೊತೆಗೂ ಗಲಾಟೆ ಮಾಡುತ್ತಾರೆ ಎಂದು ದೂರಿದ್ದಾರೆ.

ಮಗ ಉದಯ್ ಹಾಗೂ ಮಗಳು ವಸುಂಧರಾ ಜೊತೆಗೆ ಪತ್ನಿಯೂ ಸೇರಿಕೊಂಡು ನನಗೆ ಕಾಟ ಕೊಡುತ್ತಿದ್ದಾರೆ. ಹೀಗಾಗಿ ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದು ಹಿರಿಯ ನಟ ದೂರಿನಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಧ್ವಜ ಸುಟ್ಟು ಹಾಕಿದ ಮಹಾ ಪುಂಡರು: ಸಿಡಿದೆದ್ದ ದರ್ಶನ್, ಶಿವಣ್ಣ, ಜಗ್ಗೇಶ್