Select Your Language

Notifications

webdunia
webdunia
webdunia
webdunia

ಒಂಟಿ ಕಾಲಲ್ಲಿ ನಿಲ್ಲಿಸಿ ನಾಯಿಗೆ ಚಿತ್ರಹಿಂಸೆ: ದುರುಳನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನಟ ಅನಿರುದ್ಧ್

ಒಂಟಿ ಕಾಲಲ್ಲಿ ನಿಲ್ಲಿಸಿ ನಾಯಿಗೆ ಚಿತ್ರಹಿಂಸೆ: ದುರುಳನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನಟ ಅನಿರುದ್ಧ್
ಬೆಂಗಳೂರು , ಮಂಗಳವಾರ, 22 ಡಿಸೆಂಬರ್ 2020 (11:08 IST)
ಬೆಂಗಳೂರು: ಮನುಷ್ಯ ಎಷ್ಟು ಸ್ವಾರ್ಥಿಯೆಂದರೆ ಈ ಭೂಮಿ ಮೇಲೆ ಬದುಕುವ ಹಕ್ಕು ಕೇವಲ ತನಗೆ ಮಾತ್ರ ಇರುವುದು ಎಂದುಕೊಂಡಿದ್ದಾನೆ. ಇದೇ ಕಾರಣಕ್ಕೆ ಮೂಕ ಪ್ರಾಣಿಗಳನ್ನು ತನಗೆ ಇಷ್ಟಬಂದ ಹಾಗೆ ನಡೆಸಿಕೊಳ್ಳುತ್ತಾನೆ. ಇಂತಹದ್ದೇ ವಿಡಿಯೋವೊಂದನ್ನು ನಟ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ರಕ್ಷಣೆಗೆ ಮನವಿ ಮಾಡಿದ್ದಾರೆ.
 


ವ್ಯಕ್ತಿಯೊಬ್ಬ ನಾಯಿಯೊಂದಕ್ಕೆ ಕೇವಲ ಎರಡು ಕಾಲಿನಲ್ಲಿ ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ಹೊಡೆದು, ಬರೆ ಹಾಕಿ ಹಿಂಸಿಸುತ್ತಾನೆ. ಇದರಿಂದ ಆ ನಾಯಿ ಪ್ರಾಣ ಭಯದಿಂದ ದಯನೀಯವಾಗಿ ಕಿರುಚುತ್ತಿದೆ. ಈ ದೃಶ್ಯವೊಂದನ್ನು ಪ್ರಕಟಿಸಿರುವ ಅನಿರುದ್ಧ್ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪ್ರಾಣಿ ದಯಾ ಸಂಘ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ ಆತನ ವಿಳಾಸವನ್ನೂ ಈ ರೀತಿಯಾಗಿ ನೀಡಿದ್ದಾರೆ: https://maps.app.goo.gl/nUPoo2FW7r4SBLac6. ಇದನ್ನು ನೋಡಿ ಸಾಕಷ್ಟು ಜನ ಸಂದೇಶ ಕಳುಹಿಸಿದ್ದು, ದಯವಿಟ್ಟು ಆ ನಾಯಿಯನ್ನು ನಮಗೆ ನೀಡಿ. ಈ ರೀತಿ ಪ್ರಾಣಿ ಹಿಂಸೆ ಮಾಡುವವನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಗಾಗಿ ಸ್ವಲ್ಪ ಕಾಯಿರಿ ಪ್ಲೀಸ್: ತರುಣ್ ಸುಧೀರ್ ಮನವಿ