Select Your Language

Notifications

webdunia
webdunia
webdunia
webdunia

ಬಂಧನ ಭೀತಿಯಲ್ಲಿ ನಟ ಅಜೇಯ್ ರಾವ್

ಬಂಧನ ಭೀತಿಯಲ್ಲಿ ನಟ ಅಜೇಯ್ ರಾವ್
ಬೆಂಗಳೂರು , ಬುಧವಾರ, 25 ಆಗಸ್ಟ್ 2021 (09:15 IST)
ಬೆಂಗಳೂರು: ಫೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜೇಯ್ ರಾವ್ ಈಗ ಬಂಧನ ವಾರಂಟ್ ಭೀತಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.


ರಚ್ಚೂ ಲವ್ ಯೂ ಚಿತ್ರದ ಚಿತ್ರೀಕರಣ ವೇಳೆ ಫೈಟರ್ ವಿವೇಕ್ ದುರಂತ ಸಾವನ್ನಪ್ಪಿದ್ದರು. ಈ ವೇಳೆ ಅಜೇಯ್ ರಾವ್ ಕೂಡಾ ಸ್ಥಳದಲ್ಲಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೈನ್ ಅಪರೇಟರ್ ಮಹದೇವ್ ರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದೀಗ ಚಿತ್ರೀಕರಣ ಸ್ಥಳದಲ್ಲಿದ್ದ ಅಜೇಯ್ ರಾವ್ ರನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ. ಹೀಗಾಗಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನ್ನು ಮದುವೆಯಾಗ್ತೀನಿ ಎಂದ ಅಭಿಮಾನಿಗೆ ಖುಷ್ಬೂ ಹೇಳಿದ್ದೇನು ಗೊತ್ತಾ?