ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಎರಡನೇ ಬಾರೀ ಜೈಲೂಟವೇ ಫಿಕ್ಸ್ ಆಗಿದೆ. ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡುತ್ತಿದ್ದ ಹಾಗೇ, ಪೊಲೀಸರು ಆರೋಪಿಗಳ ಅರೆಸ್ಟ್ಗೆ ಬಲೆ ಬೀಸಿದ್ದಾರೆ.
ಈಗಾಗಲೇ ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲದರ ಮಧ್ಯೆ ದರ್ಶನ್ ಮಾತ್ರ ಎಲ್ಲಿ ಇದ್ದಾರೆಂಬ ಮಾಹಿತಿ ಮಾತ್ರ ಪೊಲೀಸರಿಗೆ ಸಿಗ್ತಿಲ್ಲಾ. ದರ್ಶನ್ ಅವರ ಅರೆಸ್ಟ್ಗೆ ಅವರ ಪತ್ನಿ ಮನೆ ಬಳಿ, ದರ್ಶನ್ ಮನೆ ಬಳಿ ಹಾಗೂ ಮೈಸೂರಿನ ಫಾರ್ಮ್ಹೌಸ್ನಲ್ಲೂ ಪೊಲೀಸರ ತಂಡ ಕಾದು ಕುಳಿತಿದೆ.
ಈ ನಡುವೆ ದರ್ಶನ್ ತಮಿಳುನಾಡಿಗೆ ತೆರಳಿದ್ದ ಎನ್ನಲಾದ ಜೀಪು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಪ್ಲಾಟ್ಗೆ ಬಂದಿದೆ. ಆದರೆ ಅದರಲ್ಲಿ ದರ್ಶನ್ ಇರಲಿಲ್ಲೆ ಎಂಬ ಮಾಹಿತಿ ತಿಳಿದುಬಂದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ದರ್ಶನ್ ನೇರವಾಗಿ ಕೋರ್ಟ್ಗೆ ಶರಣಾಗುವ ಸಾಧ್ಯತೆಯಿದೆ ಎನ್ನಲಾಗಿದೆ.