Webdunia - Bharat's app for daily news and videos

Install App

ಕೇರಳ ಜನರ ನೆರವಿಗೆ ನಿಂತ ಟೆಲಿಕಾಂ ಕಂಪನಿಗಳು

Webdunia
ಶನಿವಾರ, 18 ಆಗಸ್ಟ್ 2018 (06:56 IST)
ಕೇರಳ : ಕೇರಳದಲ್ಲಿ ಪ್ರವಾಹದಿಂದ ನಿರಾಶ್ರಿತರ ನೆರವಿಗೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ತಮ್ಮ ಸಹಾತಹಸ್ತವನ್ನು ನೀಡಿದ್ದಾರೆ. ಅದೇರೀತಿ ಇದೀಗ ಟೆಲಿಕಾಂ ಕಂಪನಿಗಳು ಕೂಡ ಕೇರಳ ಜನರ ನೆರವಿಗೆ ನಿಂತಿದೆ.


ಹೌದು ಕೇರಳದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕೇರಳದ ಜನರ ನೆರವಿಗೆ ಇದೀಗ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಟೆಲಿಕಾಂ ಕಂಪನಿಗಳು ನಿಂತಿವೆ.


ಏರ್ಟೆಲ್ ಕೇರಳದ ಪ್ರೀಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಹಾಗೂ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕವನ್ನು ವಿಸ್ತರಿಸಿದೆ. ಜೊತೆಗೆ ಏರ್ಟೆಲ್, ತೊಂದರೆಗೊಳಗಾದ ಗ್ರಾಹಕರಿಗೆ ಉಚಿತ ವೈಫೈ ಹಾಗೂ ಕರೆ ಸೌಲಭ್ಯವನ್ನು ನೀಡ್ತಿದೆ. ಏರ್ಟೆಲ್ ಸ್ಟೋರ್ ಗಳಲ್ಲಿ ಬ್ಯಾಟರಿ ಚಾರ್ಜ್ ಗೆ ಅವಕಾಶ ಕೂಡ ಮಾಡಿಕೊಡ್ತಿದೆ.


ಜಿಯೋ ಕೂಡ ಗ್ರಾಹಕರ ನೆರವಿಗೆ ಮುಂದಾಗಿದೆ. ಉಚಿತ ಡೇಟಾ ಹಾಗೂ ಕರೆ ನೀಡುವ ಘೋಷಣೆ ಮಾಡಿದೆ. ಹಾಗೇ ವೊಡಾಫೋನ್ ಕೂಡ ತನ್ನೆಲ್ಲ ಪ್ರೀಪೇಯ್ಡ್ ಗ್ರಾಹಕರಿಗೆ 30 ರೂಪಾಯಿ ಮೌಲ್ಯದ ಟಾಕ್ ಟೈಂ ಉಚಿತವಾಗಿ ನೀಡ್ತಿದೆ. ಇದನ್ನು ಆಯಕ್ಟಿವ್ ಮಾಡಲು ಗ್ರಾಹಕರು CREDIT ಎಂದು ಟೈಪ್ ಮಾಡಿ 144 ನಂಬರ್ ಗೆ ಎಸ್‌ಎಂಎಸ್ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments